ರಜನಿ ಚಿತ್ರಕ್ಕೆ ಧನುಷ್ ನಿರ್ಮಾಪಕ

Update: 2016-09-04 06:20 GMT

ಈ ಸುದ್ದಿಯನ್ನು ಕೇಳಿ ‘ತಲೈವರ್’ ರಜನಿಕಾಂತ್ ಅಭಿಮಾನಿಗಳು ಖಂಡಿತವಾಗಿಯೂ ಥ್ರಿಲ್ ಆಗಲಿದ್ದಾರೆ. ಹೌದು. ರಜನಿ ಅಭಿನಯದ ಚಿತ್ರವೊಂದನ್ನು ಅವರ ಅಳಿಯ, ತಮಿಳು ಚಿತ್ರರಂಗದ ಜನಪ್ರಿಯ ನಟ ಧನುಷ್ ನಿರ್ಮಿಸಲಿದ್ದಾರೆ. ಮಾವ ರಜನಿ ಚಿತ್ರಕ್ಕೆ ತಾನು ನಿರ್ಮಾಪಕನಾಗಲಿ ರುವುದನ್ನು ಸ್ವತಃ ಧನುಷ್ ಟ್ವಿಟರ್‌ನಲ್ಲಿ ದೃಢಪಡಿಸಿದ್ದಾರೆ. ಇದರೊಂದಿಗೆ ಈ ಚಿತ್ರದ ಟೀಸರ್ ಕೂಡಾ ಅವರು ಅಪ್‌ಲೋಡ್ ಮಾಡಿದ್ದಾರೆ. ಧನುಷ್ ತಮಿಳಿನಲ್ಲಿ ತನ್ನದೇ ಇಮೇಜನ್ನು ಸೃಷ್ಟಿಸಿಕೊಂಡಿರುವ ನಟ. ಇದೇ ಮೊದಲ ಬಾರಿಗೆ ಆತ ರಜನಿ ಚಿತ್ರದಲ್ಲಿ ಒಳಗೊಂಡಿರುವುದು, ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡುವುದಂತೂ ಖಂಡಿತ. ಆದರೆ ಧನುಷ್ ತಾನು ಕೂಡಾ ಈ ಚಿತ್ರದಲ್ಲಿ ನಟಿಸಲಿದ್ದಾನೆಯೇ ಎಂಬ ಬಗ್ಗೆ ಮಾತ್ರ ಈವರೆಗೆ ಬಾಯಿಬಿಟ್ಟಿಲ್ಲ. ಇದರ ಜೊತೆಗೆ ಧನುಷ್ ಇನ್ನೊಂದು ಚಿತ್ರಪ್ರೇಮಿಗಳಿಗೆ ಇನ್ನೊಂದು ಸರ್‌ಪ್ರೈಸ್ ಕೂಡಾ ನೀಡಿದ್ದಾರೆ.

ಬಾಕ್ಸ್ ಆಫೀಸಿನಲ್ಲಿ ದಾಖಲೆಯ ಜಯಭೇರಿ ಬಾರಿಸಿರುವ ಕಬಾಲಿ ಚಿತ್ರದ ನಿರ್ದೇಶಕ ಪಾ. ರಂಜಿತ್ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಕಬಾಲಿ ಬಿಡುಗಡೆಯಾದ ಆರಂಭದ ದಿನಗಳಲ್ಲಿ ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ಕೇಳಿಬಂದಿದ್ದರೂ, ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಯಶಸ್ಸು ಸಾಸಿತು. ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿ ಗೂ ಇಷ್ಟವಾದ ಕಬಾಲಿಯ ಗಳಿಕೆ ಎರಡೇ ವಾರಗಳಲ್ಲಿ 500 ಕೋಟಿ ರೂ. ದಾಟಿತ್ತು. ಪ್ರಸ್ತುತ ರಜನಿ ನಾಯಕತ್ವದ ಶಂಕರ್ ನಿರ್ದೇಶನದ ಎಂದಿರನ್ 2.0 ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಾಲಿವುಡ್‌ನ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಎಂದಿರನ್ 2.0ನಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಎಂದಿರನ್ 2.0 ಚಿತ್ರ ಪೂರ್ಣಗೊಳ್ಳುತ್ತಿದ್ದಂತೆಯೇ ಧನುಷ್ ನಿರ್ಮಾಣದ ಚಿತ್ರಕ್ಕೆ ರಜನಿ ಬಣ್ಣ ಹಚ್ಚಲಿದ್ದಾರೆ. ಒಟ್ಟಿನಲ್ಲಿ ರಜನಿ-ಧನುಷ್ ಕಾಂಬಿನೇಶನ್ ಅಭಿಮಾನಿಗಳಿಗೆ ನೀಡಲಿದೆ ಧಮಾಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News