ಹಫ್ತಾ ನೀಡದ್ದಕ್ಕೆ ಅಮಾಯಕನ ಬರ್ಬರ ಕೊಲೆ

Update: 2016-09-10 10:04 GMT

ಭಾವ್ನಗರ್,ಸೆ.10 : ಗುಜರಾತ್ ನ ಭಾವ್ನಗರ್ ಪಟ್ಟಣದಲ್ಲಿ ಎಂಟು ಜನ ದುಷ್ಕರ್ಮಿಗಳ ಗುಂಪೊಂದು ಅಮಾಯಕ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ದೊಣ್ಣೆ ಹಾಗೂ ಕಬ್ಬಿಣದ ರಾಡುಗಳಿಂದ ಹೊಡೆದು ಸಾಯಿಸಿದ್ದು, ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ಪೊಲೀಸರು ಈಗಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕೊಲೆಗೀಡಾದ ವ್ಯಕ್ತಿಯನ್ನು ರಫೀಖ್ ಹುಸೈನ್ ಎಂದು ಗುರುತಿಸಲಾಗಿದೆ.ದುಷ್ಕರ್ಮಿಗಳೆಲ್ಲರೂ 17 ರಿಂದ 19 ರ ಹರೆಯದವರು ತಂದು ತಿಳಿದು ಬಂದಿದೆ.

ಕೊಲೆಗೀಡಾದ ವ್ಯಕ್ತಿ ಹುಸೈನ್ ತರಕಾರಿ ವ್ಯಾಪಾರಿಯಾಗಿದ್ದು ಇತ್ತೀಚೆಗಷ್ಟೇ ಆ ಪ್ರದೇಶದಲ್ಲಿ ರೂ 25 ಲಕ್ಷ ಕೊಟ್ಟು ಮನೆ ಖರೀದಿಸಿದ್ದರು. ಪೊಲೀಸರು ಹೇಳುವಂತೆ ಸ್ಥಳೀಯ ಯುವಕರ ಗುಂಪೊಂದು ಅವರನ್ನು ಕಳೆದ ಕೆಲ ದಿನಗಳಿಂದ ಹಫ್ತಾಕ್ಕಾಗಿ ಪೀಡಿಸುತ್ತಿತ್ತೆನ್ನಲಾಗದೆ.

ಆದರೆ ಹುಸೈನ್ ಅವರ ಬೇಡಿಕೆಗೆ ಸೊಪ್ಪು ಹಾಕದೆ ತಾನು ಮನೆಯನ್ನು ಸಾಲ ಪಡೆದು ಖರೀದಿಸಿದ್ದಾಗಿ ಹೇಳಿದ್ದರು. ಹೆಚ್ಚಿನ ಎಲ್ಲಾ ಆರೋಪಿಗಳನ್ನು ಸಿಸಿಟಿವಿ ದೃಶ್ಯಾವಳಿಗಳಿಂದ ಗುರುತಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ಸಂಬಂಧ ಕೆಲವರನ್ನು ವಿಚಾರಣೆಗಾಗಿ ವಶಪಡಿಸಿಕೊಳ್ಳಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News