ಖಾನ್ ಗಳ ವಿರುದ್ಧ ಅಭಿಜಿತ್ ಟ್ವೀಟ್ ದಾಳಿ !

Update: 2016-09-24 10:50 GMT

ಮುಂಬೈ, ಸೆ. 24 : ಊರಿ ಆತ್ಮಹತ್ಯಾ ದಾಳಿ ಘಟನೆಯ ಹಿನ್ನೆಲೆಯಲ್ಲಿ ಬಾಲಿವುಡ್ ಗಾಯಕ ಅಭಿಜಿತ್ ಭಟ್ಟಾಚಾರ್ಯ ಮತ್ತೊಮ್ಮೆ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಬಾರಿ ಅವರು ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ಶಾರುಖ್ , ಸಲ್ಮಾನ್ ಹಾಗು ಆಮಿರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಅವರನ್ನು " ನಾಚಿಕೆಯಿಲ್ಲದವರು" ಎಂದು ಜರೆದಿರುವ ಅಭಿಜಿತ್ ಅಲ್ಲಿಗೇ ನಿಂತಿಲ್ಲ. ಇನ್ನೂ ಮುಂದೆ ಹೋಗಿ ನಿರ್ದೇಶಕರಾದ ಕರಣ್ ಜೋಹರ್ ಹಾಗು ಮಹೇಶ್ ಭಟ್ ಅವರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಬಳಸಿ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಹಿಂದೆ ಇದೇ ರೀತಿಯ ಅವಹೇಳನಕಾರಿ ಪದಗಳನ್ನು ಮಹಿಳೆಯೊಬ್ಬರ ವಿರುದ್ಧ ಬಳಸಿದ್ದಕ್ಕೆ  ಅಭಿಜಿತ್ ಪೋಲೀಸರ ಅತಿಥಿಯಾಗಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News