ಬಿಡಿಸಲಾಗದ ಬ್ರಹ್ಮಗಂಟೇ?

Update: 2016-10-13 06:50 GMT

ನೈಋತ್ಯ ಮಾರುತದ ಮೂಲಕ ಪ್ರಾರಂಭವಾಗುವ ಕರ್ನಾಟಕದ ಮುಂಗಾರು ಮಳೆಗಾಲದ ಅವ ಜೂನ್‌ನಿಂದ ಸೆಪ್ಟಂಬರ್‌ವರೆಗೆ, ಅದೃಷ್ಟವಿದ್ದರೆ ಅದು ಅಕ್ಟೋಬರ್‌ವರೆಗೂ ಮುಂದುವರಿಯಬಹುದು. ತಮಿಳುನಾಡಿಗೂ ಇದೇ ಅವಯಲ್ಲಿ ಸುರಿಯುವ ಮುಂಗಾರು ಮಳೆಯ ಜತೆಗೆ ಅಕ್ಟೋಬರ್‌ನಿಂದ ಜನವರಿವರೆಗೆ ವಾಯವ್ಯ ಮಾರುತದಿಂದಲೂ ಮಳೆ ಸುರಿಯುತ್ತದೆ. ನಾವು ನೈಋತ್ಯ ಮಾರುತವನ್ನಷ್ಟೇ ನಂಬಿಕೊಂಡಿದ್ದರೆ ಅವರಿಗೆ ನೈಋತ್ಯ ಮತ್ತು ವಾಯವ್ಯ ಮಳೆ ಕೂಡಾ ಲಭ್ಯ. ಒಂದು ಅಂದಾಜಿನ ಪ್ರಕಾರ ಈಶಾನ್ಯ ಮಾರುತದಿಂದ ತಮಿಳುನಾಡಿಗೆ 200 ಟಿಎಂಸಿಗೂ ಹೆಚ್ಚು ನೀರು ಹರಿದು ಬರುತ್ತಿದೆ. ಈ ರೀತಿ ಹವಾಮಾನದ ಆಟದಿಂದಲೂ ಅನ್ಯಾಯಕ್ಕೀಡಾಗಿರುವುದು ಕರ್ನಾಟಕ.

ಕಾವೇರಿ ನದಿನೀರು ಹಂಚಿಕೆಯಲ್ಲಿ ಪ್ರತೀ ಬಾರಿಯೂ, ಕರ್ನಾಟಕ ರಾಜ್ಯಕ್ಕೆ ಯಾಕೆ ಅನ್ಯಾಯವಾಗುತ್ತಿದೆ? ಎನ್ನುವುದು ಒಂದೇ ವಾಕ್ಯದ ಸರಳ ಪ್ರಶ್ನೆಯಾದರೂ ಉತ್ತರ ಮಾತ್ರ ಅಷ್ಟು ಸರಳವೂ ಅಲ್ಲ, ಸಣ್ಣದೂ ಅಲ್ಲ. ಅದೇ ರೀತಿ ಈ ವಿವಾದದ ಕಗ್ಗಂಟು ಬಿಡಿಸಲು ಪರಿಹಾರ ಗಳೇನು ಎನ್ನುವ ಪ್ರಶ್ನೆಗೆ ಕೂಡಾ ಸರಳವಾದ, ಸಣ್ಣದಾದ ಉತ್ತರ ಇಲ್ಲ.
ಮೊದಲನೆಯದಾಗಿ ಯಾಕೆ ಅನ್ಯಾಯವಾಗುತ್ತಿದೆ? ಇತಿಹಾಸದಲ್ಲಿ ನಡೆಯುವ ಒಂದು ಸಣ್ಣ ಅವಘಡವೂ ಅದರ ದಾರಿಯ ದಿಕ್ಕನ್ನೇ ಬದಲಿಸಿ ಬಿಡುತ್ತದೆ. 1799ರಲ್ಲಿ ಟಿಪ್ಪು ಸುಲ್ತಾನ ಬ್ರಿಟಿಷರ ಕೈಯಲ್ಲಿ ಸೋಲುಣ್ಣದೆ ಇದ್ದಿದ್ದರೆ ಬಹುಷ: ಕಾವೇರಿ ನದಿನೀರು ಹಂಚಿಕೆ ಬೇರೆಯೇ ಸ್ವರೂಪ ಪಡೆಯುತ್ತಿತ್ತೋ ಏನೋ? ಟಿಪ್ಪುಸೋತು ಬ್ರಿಟಿಷರ ಮರ್ಜಿಯಡಿ ಮೈಸೂರು ಸಂಸ್ಥಾನ ಸ್ಥಾಪನೆಯಾಯಿತೋ ಅಂದಿನಿಂದ ಈಗಿನ ತಮಿಳುನಾಡು ಅಂದರೆ ಆಗಿನ ಮದ್ರಾಸ್ ಸಂಸ್ಥಾನದ ಕಡೆಯಿಂದ ಕಾವೇರಿ ನದಿ ನೀರಿನ ಬಗ್ಗೆ ಕ್ಯಾತೆ ಶುರುವಾಯಿತು.

ಮೊದಲು ಕೆರೆಗಳ ದುರಸ್ತಿ ವಿರೋಸಿ ಮದ್ರಾಸ್‌ನಲ್ಲಿ ಪ್ರತಿಭಟನೆ, ನಂತರ, ಕಾವೇರಿ ನದಿಗೆ ಬಾಂದಾರ ಕಟ್ಟಲು ವಿರೋಧ. ಅದರ ಪರಿಣಾಮವೇ 1892ರ ಒಪ್ಪಂದ. ಮೈಸೂರು ಸಂಸ್ಥಾನ ಕಾವೇರಿ ಕಣಿವೆಯಲ್ಲಿ ಹೊಸ ಯೋಜನೆಗಳ ಪ್ರಾರಂಭ ಬಿಡಿ, ಹಳೆಕೆರೆಗಳ ದುರಸ್ತಿ ಮಾಡಬೇಕಾದರೂ ಮದ್ರಾಸ್ ಸಂಸ್ಥಾನದ ಅನುಮತಿ ಪಡೆಯಬೇಕೆಂಬ ನಿರ್ಬಂಧ ಹೇರಿದ್ದ ಈ ಏಕಪಕ್ಷೀಯ ಒಪ್ಪಂದ 32 ವರ್ಷಗಳ ಕಾಲ ಜಾರಿಯಲ್ಲಿತ್ತೆನ್ನುವುದು ಗಮನಾರ್ಹ. ಕೊನೆಗೂ ಮೈಸೂರು ಜನತೆಯ ಪ್ರತಿಭಟನೆ ಕಂಡು ಹಿಂದಿನ ಒಪ್ಪಂದವನ್ನು ರದ್ದುಗೊಳಿಸಿ 1924ರಲ್ಲಿ 50 ವರ್ಷಗಳ ಅವಯ ಇನ್ನೊಂದು ಒಪ್ಪಂದ ಮಾಡಿಕೊಳ್ಳಲಾಯಿತು. ಇದು ಕೂಡಾ 1892ರ ಒಪ್ಪಂದದಿಂದ ಭಿನ್ನವಾಗಿ ಇರಲಿಲ್ಲ. ಮೈಸೂರು ಪ್ರಾಂತ್ಯದಲ್ಲಿ ಕೈಗೆತ್ತಿಕೊಳ್ಳಲಾಗುವ ನೀರಾವರಿ ಯೋಜನೆಗಳಿಗೆ ಮದ್ರಾಸ್‌ನ ಪೂರ್ವಾನುಮತಿಬೇಕೆಂಬ ನಿರ್ಬಂಧ ಹೊಸ ಒಪ್ಪಂದದಲ್ಲಿಯೂ ಮುಂದುವರಿದಿತ್ತು. ಇದರ ಜತೆಗೆ ಈ ಒಪ್ಪಂದದಿಂದಾಗಿ ಕಾವೇರಿ ನದಿಯ ಒಟ್ಟು ನೀರಿನ ಪ್ರಮಾಣದಲ್ಲಿ ಮೈಸೂರು ಪ್ರಾಂತ್ಯದ ಕೊಡುಗೆ ಶೇ.75 ಆಗಿದ್ದರೂ ಒಪ್ಪಂದದಿಂದ ಮೈಸೂರಿಗೆ ಸಿಕ್ಕಿದ್ದು 2.75 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ. ಮದರಾಸಿಗೆ ದೊರೆತದ್ದು 15 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಮುಕ್ತ ಅವಕಾಶ.

1992ರಲ್ಲಿ ಕಾವೇರಿ ನ್ಯಾಯಮಂಡಳಿ ಮಧ್ಯಾಂತರ ತೀರ್ಪಿನ ವರೆಗೆ ಅಂದರೆ 68 ವರ್ಷಗಳ ಕಾಲ ಈ ಎರಡೂವರೆ ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ನಿರ್ಬಂಧ ಮುಂದುವರಿದಿತ್ತು. ಹೆಚ್ಚು ಕಡಿಮೆ ಒಂದು ಶತಮಾನ ನಿರಂತರವಾಗಿ ಕರ್ನಾಟಕಕ್ಕೆ ಕಾವೇರಿ ನದಿ ನೀರಿನಲ್ಲಿ ನ್ಯಾಯದ ಪಾಲಿನ ಅವಕಾಶದಿಂದ ವಂಚನೆಯಾಯಿತು. 1924ರ ಒಪ್ಪಂದ 50 ವರ್ಷಗಳ ನಂತರ ಕೊನೆ ಗೊಳ್ಳಬೇಕಾಗಿದ್ದರೂ ಅದು ಮುಂದುವರಿದುಕೊಂಡು ಹೋಗುವಂತೆ ಮಾಡಿದ್ದು ಇನ್ನೊಂದು ಹುನ್ನಾರ.

ಇದು ಕರ್ನಾಟಕಕ್ಕೆ ಕಾವೇರಿ ನದಿನೀರು ಹಂಚಿಕೆಯಲ್ಲಿ ಅನ್ಯಾಯವಾಗಲು ಕಾರಣವಾದ ಇತಿಹಾಸ. ಅಚ್ಚರಿ ಎಂದರೆ ಕಾವೇರಿ ನ್ಯಾಯಮಂಡಳಿಯ ಐತೀರ್ಪಿನ ಹೊರತಾಗಿಯೂ ಈ ಒಪ್ಪಂದದ ತೂಗುಕತ್ತಿ ಕರ್ನಾಟಕದ ತಲೆಮೇಲೆ ಇನ್ನೂ ತೂಗುತ್ತಿದೆ. ಅದರಿಂದ ಇನ್ನೂ ಸಂಪೂರ್ಣವಾಗಿ ಬಿಡುಗಡೆ ಸಿಕ್ಕಿಲ್ಲ. ಅಂತಿಮ ಐತೀರ್ಪಿನಲ್ಲಿಯೂ ಕಂಡು ಕಾಣದಂತೆ 1924ರ ಒಪ್ಪಂದದ ಭೂತದ ನೆರಳೂ ಇದೆ. ತಮಿಳುನಾಡು ರೈತ ವಿರೋಯಾಗಿರುವ, ಪ್ರಜಾಪ್ರಭುತ್ವ ವಿರೋಯಾಗಿರುವ 1924ರ ಒಪ್ಪಂದವನ್ನು ಈಗಲೂ ತನ್ನ ‘ಬೈಬಲ್’ ಎನ್ನುತ್ತಿದೆ.

ವಿವಾದಕ್ಕೆ ಇನ್ನೊಂದು ಕಾರಣ ಭೌಗೋಳಿಕವಾದುದು. ಕರ್ನಾಟಕ ಕಾವೇರಿಯ ತವರೂರು, ನಮ್ಮ ಜೀವನದಿ, ನಮ್ಮಲ್ಲಿಯೇ ಅದು ಹೆಚ್ಚು ಹರಿಯುತ್ತಿರುವುದು, ನಮ್ಮಲ್ಲಿನ ನೀರಿನ ಉತ್ಪನ್ನವೇ ಹೆಚ್ಚು... ಎಲ್ಲವೂ ಸರಿ. ನೀರಿನ ವಿವಾದದಲ್ಲಿ ನಮ್ಮ ಹೆಮ್ಮೆ ಎಂದು ತಿಳಿದುಕೊಂಡಿರುವ ಈ ಎಲ್ಲ ಅಂಶಗಳು ನಮ್ಮ ಪಾಲಿನ ದುರದೃಷ್ಟಕರ ಅಂಶಗಳು. ಇದು ಕರ್ನಾಟಕ ರಾಜ್ಯವೊಂದರ ಸಮಸ್ಯೆ ಅಲ್ಲ, ನದಿಮೇಲ್ಭಾಗದಲ್ಲಿರುವ ಎಲ್ಲ ರಾಜ್ಯ ದೇಶಗಳ ಸಮಸ್ಯೆ. ಜಲವಿವಾದಗಳನ್ನು ಬಗೆಹರಿಸಲು ಬಳಸಲಾಗುವ ನದಿ ಮೇಲ್ಭಾಗದಲ್ಲಿರುವ ಪ್ರದೇಶದ ಬಗ್ಗೆ ಪರವಾಗಿರುವ ಹೆಲ್ಸಂಕಿ ಸೂತ್ರವೂ ಕರ್ನಾಟಕ ನಿರಂತರವಾಗಿ ಅನ್ಯಾಯಕ್ಕೀಡಾಗಲು ಕಾರಣ. 1924ರ ಒಪ್ಪಂದ ಕೂಡಾ ಇದೇ ಸೂತ್ರದಿಂದ ಪ್ರೇರಿತವಾದುದು. 2007ರ ಕಾವೇರಿ ನ್ಯಾಯಮಂಡಳಿಯ ಐತೀರ್ಪಿನಲ್ಲಿ 1924ರ ಒಪ್ಪಂದವನ್ನು ತಳ್ಳಿಹಾಕಿದ್ದರೂ ಗುಪ್ತಗಾಮಿನಿಯಾಗಿ ಈ ಸೂತ್ರ ಹರಿದಿದೆ. ದಿಲ್ಲಿಯ ವಕೀಲ ಮೋಹನ ಕಾತರಕಿ ಅವರು ಹೇಳಿರುವಂತೆ ಜಲವಿವಾದದಲ್ಲಿ ನದಿಮೇಲ್ಬಾಗದಲ್ಲಿರುವವರನ್ನು ಗುಮಾನಿಯಿಂದಲೂ, ಕೆಳಭಾಗದಲ್ಲಿರುವವರನ್ನು ಅನುಕಂಪದಿಂದ ನೋಡಲಾಗುತ್ತದೆ.

ಮೂರನೆಯ ಕಾರಣ ಕೂಡಾ ಪ್ರಾಕೃತಿಕವಾದುದು. ನೈಋತ್ಯ ಮಾರುತದ ಮೂಲಕ ಪ್ರಾರಂಭವಾಗುವ ಕರ್ನಾಟಕದ ಮುಂಗಾರು ಮಳೆಗಾಲದ ಅವ ಜೂನ್‌ನಿಂದ ಸೆಪ್ಟಂಬರ್‌ವರೆಗೆ, ಅದೃಷ್ಟವಿದ್ದರೆ ಅದು ಅಕ್ಟೋಬರ್‌ವರೆಗೂ ಮುಂದುವರಿಯಬಹುದು. ತಮಿಳುನಾಡಿಗೂ ಇದೇ ಅವಯಲ್ಲಿ ಸುರಿಯುವ ಮುಂಗಾರು ಮಳೆಯ ಜತೆಗೆ ಅಕ್ಟೋಬರ್‌ನಿಂದ ಜನವರಿ ವರೆಗೆ ವಾಯವ್ಯ ಮಾರುತದಿಂದಲೂ ಮಳೆ ಸುರಿಯುತ್ತದೆ. ನಾವು ನೈಋತ್ಯ ಮಾರುತವನ್ನಷ್ಟೇ ನಂಬಿಕೊಂಡಿದ್ದರೆ ಅವರಿಗೆ ನೈಋತ್ಯ ಮತ್ತು ವಾಯವ್ಯ ಮಳೆ ಕೂಡಾ ಲಭ್ಯ. ಒಂದು ಅಂದಾಜಿನ ಪ್ರಕಾರ ಈಶಾನ್ಯ ಮಾರುತದಿಂದ ತಮಿಳುನಾಡಿಗೆ 200 ಟಿಎಂಸಿಗೂ ಹೆಚ್ಚು ನೀರು ಹರಿದು ಬರುತ್ತಿದೆ. ಈ ರೀತಿ ಹವಾಮಾನದ ಆಟದಿಂದಲೂ ಅನ್ಯಾಯಕ್ಕೀಡಾಗಿರುವುದು ಕರ್ನಾಟಕ.

ಈ ಕಾರಣದಿಂದಾಗಿ ಕರ್ನಾಟಕದ ರೈತರು ಮುಂಗಾರು ಬೆಳೆಯನ್ನು ಮಾತ್ರ ಬೆಳೆದರೆ, ತಮಿಳುನಾಡು ಕುರುವೈ ಮತ್ತು ಸಾಂಬಾ ಜತೆಗೆ ತಾಳಂಡಿ ಎನ್ನುವ ಮೂರನೆ ಬೆಳೆಯನ್ನೂ ಬೆಳೆಯುತ್ತಾರೆ. ಮುಂಗಾರು ಬೆಳೆಗೆ ಮೆಟ್ಟೂರು ಜಲಾಶಯದ ನೀರು ಸಂಗ್ರಹವನ್ನು ಬಳಸಿಕೊಳ್ಳದೆ ಕುರುವೈ ಬೆಳೆಗೆ ಸಂಪೂರ್ಣವಾಗಿ ಕರ್ನಾಟಕದಿಂದ ಹರಿದು ಬರುವ ನೀರನ್ನೇ ಬಳಸಿಕೊಳ್ಳಬೇಕೆಂಬ ಯೋಜನೆ ತಮಿಳುನಾಡು ರಾಜ್ಯದ್ದು. ಇದಕ್ಕೆ ಅನುಗುಣವಾಗಿ ಪ್ರತಿವರ್ಷ ಜುಲೈನಿಂದ ಸೆಪ್ಟಂಬರ್‌ವರೆಗಿನ ಅವಯಲ್ಲಿ ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದವನ್ನು ಕೆದಕಲು ಶುರುಮಾಡುತ್ತದೆ. ಈ ರೀತಿ ವಿವಾದವನ್ನು ಕೆದಕುತ್ತಾ ಕೇಂದ್ರ ಸರಕಾರ, ನ್ಯಾಯಮಂಡಳಿ ಮತ್ತು ನ್ಯಾಯಾಲಯದ ಗಮನಸೆಳೆದು ನೀರುಬಿಡುವಂತೆ ಕರ್ನಾಟಕದ ಮೇಲೆ ಒತ್ತಡ ಬೀಳುವಂತೆ ಮಾಡುತ್ತದೆ.

ಬಹಳಷ್ಟು ಬಾರಿ ಈ ರೀತಿಯ ಬ್ಲಾಕ್ ಮೇಲ್‌ನಿಂದ ಆ ರಾಜ್ಯಕ್ಕೆ ಲಾಭವಾಗಿದೆ, ಕರ್ನಾಟಕಕ್ಕೆ ನಷ್ಟವಾಗಿದೆ. ನಾಲ್ಕನೆಯ ಕಾರಣ ಎರಡು ಭಾಷೆಗಳದ್ದು. ನಮ್ಮ ನೀರಿನ ಜಗಳ ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜತೆಯಲ್ಲಿದ್ದರೂ ಕಾವೇರಿ ಜಲವಿವಾದದಂತೆ ಅದು ಎರಡು ಭಾಷಿಕರ ನಡುವಿನ ಜಗಳವಾಗಿಲ್ಲ. ಕೃಷ್ಣಾ ಜಲವಿವಾದಕ್ಕೆ ಸಂಬಂಸಿದಂತೆ ಕನ್ನಡಿಗರು ಮತ್ತು ತೆಲುಗರು ಬಡಿದಾಡಿಕೊಂಡಿಲ್ಲ. ಆದರೆ ತಮಿಳು ಎಂದಾಕ್ಷಣ ಕನ್ನಡಿಗರಲ್ಲಿಯೂ, ಕನ್ನಡ ಎಂದಾಕ್ಷಣ ತಮಿಳರಲ್ಲಿಯೂ ಭಾಷಾಭಿಮಾನ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳಾಗಲಿ, ಸಾಹಿತಿ-ಕಲಾವಿದರಾಗಲಿ ಕೂತು ವಿವಾದದ ಪರಿಹಾರವನ್ನು ಕಂಡುಕೊಳ್ಳಲಾಗದ ಪರಿಸ್ಥಿತಿ ಇದೆ.

ಐದನೆ ಕಾರಣ ರಾಜಕೀಯದ್ದು. ತಮಿಳುನಾಡಿನಲ್ಲಿ ಉದ್ದಕ್ಕೂ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಪ್ರತಿಬಾರಿ ಅಲ್ಲಿನ ಆಳುವ ಪಕ್ಷ ಕೇಂದ್ರದ ಆಳುವ ಪಕ್ಷದ ಜತೆ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾದ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುತ್ತದೆ. ಇದರಿಂದಾಗಿ ತಮಿಳುನಾಡು ಮುಖ್ಯಮಂತ್ರಿಗಳು ಕೇಂದ್ರ ಸರಕಾರವನ್ನು ಕೂಡಾ ಬ್ಲಾಕ್ ಮೇಲ್ ಮಾಡುತ್ತಿರುತ್ತಾರೆ. ಇದು ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಸೇರಿದಂತೆ ಸಾರ್ವಕಾಲಿಕ ಸತ್ಯ. ಆದರೆ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳೇ ಸಾಮಾನ್ಯವಾಗಿ ಅಕಾರದಲ್ಲಿರುತ್ತವೆ. ಇವುಗಳು ತಮಿಳುನಾಡು ಮುಖ್ಯಮಂತ್ರಿಗಳಂತೆ ಸ್ವಂತ ನಿರ್ಧಾರ ಕೈಗೊಳ್ಳುವುದು ಕಷ್ಟವಾಗುತ್ತದೆ.

ಆರನೆ ಕಾರಣ ಜನಾಭಿಪ್ರಾಯದ್ದು. ಕರ್ನಾಟಕದಿಂದ ಹೊರಗೆ ಅದರಲ್ಲೂ ಸುಪ್ರೀಂಕೋರ್ಟ್ ಮತ್ತು ನ್ಯಾಯಮಂಡಳಿಗಳ ಕೇಂದ್ರ ಸ್ಥಾನ ಇರುವ ಹೊಸದಿಲ್ಲಿಯಲ್ಲಿ ಕನ್ನಡಿಗರ ಪ್ರಭಾವ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕನ್ನಡಿಗರನ್ನು ದುರ್ಬೀನು ಹಿಡಿದು ಹುಡುಕಬೇಕು. ಅಲ್ಲಿಲ್ಲಿ ಇದ್ದವರೂ ತಪ್ಪಿಯೂ ತಾವು ಕನ್ನಡಿಗರೆಂದು ಗುರುತಿಸಿಕೊಳ್ಳುವುದಿಲ್ಲ. ಕನ್ನಡದಲ್ಲಿ ಮಾತನಾಡಿದರೂ ಹಿಂದಿಯಲ್ಲಿ ಉತ್ತರಿಸುತ್ತಾರೆ. (ಇದು ನನ್ನ ಅನುಭವದ ಮಾತು). ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರದ ಯಾವುದೇ ಇಲಾಖೆಗೆ ಹೋದರೂ ಅಲ್ಲೊಂದಿಬ್ಬರು ತಮಿಳು ಅಕಾರಿಗಳಿರುತ್ತಾರೆ. ಕೇಂದ್ರ ಜಲ ಸಂಪನ್ಮೂಲ ಖಾತೆಯ ಈಗಿನ ಕಾರ್ಯದರ್ಶಿ ಕೂಡಾ ತಮಿಳು ನಾಡಿಗೆ ಸೇರಿದವರು. ಇದಲ್ಲದೆ ಯಾವುದಾ ದರೂ ಮಾಧ್ಯಮ ಕಚೇರಿಗೆ ಹೋದರೂ ಅಲ್ಲಿಯೂ ತಮಿಳು ಪತ್ರ ಕರ್ತರಿರುತ್ತಾರೆ.

ನ್ಯಾಯಾ ಲಯದಲ್ಲಿಯೂ ತಮಿಳು ವಕೀಲರ ಸಂಖ್ಯೆ ಸಾಕಷ್ಟಿದೆ. ಇವರೆಲ್ಲರೂ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಶಕ್ತಿ ಇದ್ದವರು. ನ್ಯಾಯಾಲಯದ ವಿವೇಚನಾ ಶಕ್ತಿಯ ಮೇಲೆ ಕೂಡಾ ಸಾರ್ವಜನಿಕ ಅಭಿಪ್ರಾಯದ ಸಣ್ಣ ಪ್ರಭಾವ ಇರುತ್ತದೆ ಎನ್ನುವುದನ್ನು ನಿರಾಕರಿಸಲಾದೀತೇ? ಏಳನೆ ಕಾರಣ ತಪ್ಪು ಜನಾಭಿಪ್ರಾಯದ್ದು. ನಮಗೆ ಮಹಾ ರಾಷ್ಟ್ರ ಜತೆ ಬೆಳಗಾವಿ ಗಡಿ ತಂಟೆಯಿದೆ, ಆಂಧ್ರಪ್ರದೇಶದ ಜತೆ ಕೃಷ್ಣಾ ನೀರಿನ ಸಮಸ್ಯೆ ಇದೆ. ಮಹಾರಾಷ್ಟ್ರ, ಗೋವಾ ಜತೆ ಮಹದಾಯಿ ನೀರಿನ ಸಮಸ್ಯೆ ಇದೆ. ಈ ಎಲ್ಲ ವಿವಾದಗಳ ಇತ್ಯರ್ಥದಲ್ಲಿ ನಾವು ಒಂದಷ್ಟು ಎಡವಟ್ಟುಗಳನ್ನು ಮಾಡಿಬಿಟ್ಟಿದ್ದೇವೆ. ದಿಲ್ಲಿಯ ಒಂದು ವಲಯದಲ್ಲಿ ಈಗಲೂ ಕರ್ನಾಟಕದವರೆಂದರೆ ನ್ಯಾಯಾಂಗ ವಿರೋಗಳು, ಭಾಷಾಂಧರು ಮತ್ತು ಜಗಳಗಂಟರು ಎಂಬ ಅಭಿಪ್ರಾಯವಿದೆ.

ಇದರ ಜತೆಗೆ ಕೆಲವು ಸ್ವಯಂಕೃತ ಅಪರಾಧಗಳಿವೆ. ಕಾವೇರಿ ನ್ಯಾಯಮಂಡಳಿಯ ಸ್ಥಾಪನೆಯನ್ನೇ ವಿರೋಸಿದ್ದ ಕರ್ನಾಟಕದ ಜನತೆಯಲ್ಲಿ ಅದರ ಬಗೆಗಿನ ಅಸಹನೆ ಹೊಸದೇನಲ್ಲ. ಕರ್ನಾಟಕದ ಪಾಲಿಗೆ ಅದು ಎಂದೆಂದೂ ಬೇಡದ ಕೂಸು. 1924ರ ಒಪ್ಪಂದ ಕೊನೆಗೊಂಡ ನಂತರ ತಮಿಳುನಾಡು ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಕರ್ನಾಟಕಕ್ಕೆ 240 ಟಿಎಂಸಿ ನೀರಿನ ಪಾಲು ನಿಗದಿಪಡಿಸಿದ್ದ ಹೊಸ ಒಪ್ಪಂದವನ್ನು 1976ರಲ್ಲಿ ಸಿದ್ದಪಡಿಸಿತ್ತು. ಅದಕ್ಕೆ ಆಗಿನ ಕರ್ನಾಟಕ ಸರಕಾರ ಅನೌಪಚಾರಿಕ ಒಪ್ಪಿಗೆಯನ್ನೂ ನೀಡಿತ್ತು.

ಆಗ ಆಡಳಿತ ಮತ್ತು ವಿರೋಧ ಪಕ್ಷದಲ್ಲಿದ್ದವರು ಈಗಲೂ ರಾಜ್ಯದಲ್ಲಿ ಸಕ್ರಿಯ ರಾಜಕಾರಣದಲ್ಲಿದ್ದಾರೆ. ತಮಿಳುನಾಡಿನಲ್ಲಿ ಆಗ ರಾಷ್ಟ್ರಪತಿ ಆಳ್ವಿಕೆ ಇಲ್ಲದೆ ಹೋಗಿದ್ದರೆ ಆ ಒಪ್ಪಂದ ಜಾರಿಗೆ ಬಂದೇ ಬಿಡುತ್ತಿತ್ತೋ ಏನೋ? ಚುನಾಯಿತ ಸರಕಾರಗಳು ಸಹಿ ಹಾಕಲಿ ತಮಿಳು ನಾಡು ರಾಜ್ಯ ಪಾಲ ಕೆ.ಕೆ.ಶಹಾ ಬಯಸಿದ್ದ ಕಾರಣ ಒಪ್ಪಂದ ಜಾರಿಗೆ ಬರಲಿಲ್ಲ. ಕೊನೆಗೂ ತಮಿಳುನಾಡಿನ ಒತ್ತಡ ಲಕೊಟ್ಟಿದ್ದು ವಿ.ಪಿ.ಸಿಂಗ್ ಪ್ರಧಾನಿ ಯಾಗಿದ್ದಾಗ. ಆಗಲೂ ಕರ್ನಾಟಕ ನ್ಯಾಯ ಮಂಡಳಿ ರಚನೆಯನ್ನು ವಿರೋಸಿತ್ತು. ಇದರ ಪರಿಣಾಮದ ಅರಿವಿದ್ದ ಕರ್ನಾಟಕದ ನಿಲುವು ಸರಿಯಾಗಿಯೇ ಇತ್ತು. ಆದರೆ ನ್ಯಾಯಮಂಡಳಿ ರಚನೆಯಾದ ನಂತರ ಕರ್ನಾಟಕ ಮುಂದುವರೆಸಿ ಕೊಂಡು ಹೋದ ಅಸಹನೆ ಮಾತ್ರ ರಾಜ್ಯದ ಪಾಲಿಗೆ ದುಬಾರಿಯಾಗಿದ್ದು ನಿಜ.

ನ್ಯಾಯಮಂಡಳಿ ರಚನೆಯೆಂದರೆ ಯುದ್ಧ ಅರ್ಧ ಗೆದ್ದ ಹಾಗೆ ಎಂದು ತಮಿಳುನಾಡಿಗೆ ತಿಳಿದಿತ್ತು. ಆದ್ದರಿಂದ ಅದು ಮುಕ್ತ ಕಂಠದಿಂದ ನ್ಯಾಯಮಂಡಳಿ ರಚನೆಯನ್ನು ಸ್ವಾಗತಿಸಿತು. ನ್ಯಾಯಮಂಡಳಿ ಆ ರಾಜ್ಯಕ್ಕೆ ಭೇಟಿ ನೀಡಿದಾಗ ನ್ಯಾಯಮೂರ್ತಿಗಳು ಸಾಗುವ ಹಾದಿಯಲ್ಲೆಲ್ಲ ಅವರನ್ನು ಸ್ವಾಗತಿಸುವ ಭಿತ್ತಿಪತ್ರಗಳು ಕಮಾನುಗಳು ರಾರಾಜಿಸುತ್ತಿದ್ದವು. ಸಾರ್ವಜನಿಕ ಸಭೆ ನಡೆದಾಗ ವೇದಿಕೆಯಲ್ಲಿ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ ಬೇರೆ ಯಾರೂ ಕೂರುತ್ತಿರಲಿಲ್ಲ. ತಂಜಾವೂರಿನ ಜಿಲ್ಲಾಕಾರಿಯೊಬ್ಬರು ನ್ಯಾಯಮೂರ್ತಿಗಳ ಕಾಲಿಗೆ ಬಿದ್ದುಬಿಟ್ಟಿದ್ದರು. ಆಗ ಅಕಾರದಲ್ಲಿ ಇಲ್ಲದೆ ಇದ್ದರೂ ಜೆ. ಜಯಲಲಿತಾ ಅವರು ಸಭೆಗೆ ಬಂದು ನ್ಯಾಯಮೂರ್ತಿಗಳನ್ನು ಖುದ್ದಾಗಿ ಸ್ವಾಗತಿಸಿದ್ದರು. ತಮಿಳುನಾಡು ಅಕಾರಿಗಳು, ನ್ಯಾಯಮೂರ್ತಿಗಳು ಮತ್ತು ಅವರ ಕುಟುಂಬದವರಿಗೆ ವಿಶೇಷ ಉಡುಗೊರೆಗಳನ್ನು ಕೊಟ್ಟಿದ್ದು ಕೂಡಾ ಆ ಕಾಲದಲ್ಲಿ ವಿವಾದವಾಗಿತ್ತು. ಅದಾದ ಕೆಲವು ವರ್ಷಗಳ ನಂತರ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯಲ್ಲಿ ಪ್ರವಾಸ ಮಾಡಲು ಬಯಸಿದಾಗ ತಮಿಳುನಾಡು ಸರಕಾರ ಅನಕೃತವಾಗಿ ವ್ಯವಸ್ಥೆ ಕಲ್ಪಿಸಿತ್ತು. ಇದು ತಮಿಳುನಾಡು ಶೈಲಿ. ಅದೆಂದೂ ನ್ಯಾಯಮಂಡಳಿಯನ್ನು ಕೆಣಕಲು ಹೋಗಿಲ್ಲ.

 ಆದರೆ ಕರ್ನಾಟಕದ ಪ್ರತಿಕ್ರಿಯೆ ತದ್ವಿರುದ್ಧವಾದುದು. ನ್ಯಾಯ ಮಂಡಳಿಯನ್ನು ಕರ್ನಾಟಕದ ಜನತೆ ಎದುರುಗೊಂಡದ್ದು ‘ಕಪ್ಪುಬಾವುಟ’ ಮತ್ತು ‘ಗೋಬ್ಯಾಕ್ ‘ಘೋಷಣೆಯ ಮೂಲಕ. ಸಾರ್ವಜನಿಕ ಅಹವಾಲು ಸ್ವೀಕರಿಸಲು ನಡೆದ ನ್ಯಾಯಮಂಡಳಿ ಸಭೆಗಳಲ್ಲಿ ಸ್ಥಳೀಯ ರಾಜಕಾರಣಿಗಳು ಮೆರೆಯಲು ಹೋಗಿ ಅವುಗಳು ರಾಜಕೀಯ ಸಭೆಗಳಾಗಿ ಹೋಗಿದ್ದವು. ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಔತಣಕೂಟಕ್ಕೆ ನ್ಯಾಯಮೂರ್ತಿಗಳೊಬ್ಬರು ಬೆಂಗಳೂರಿನಲ್ಲಿಯೇ ಇರುವ ಸಂಬಂಕರನ್ನು ಆಹ್ವಾನಿಸಲು ಬಯಸಿದಾಗ ರಾಜ್ಯದ ಅಕಾರಿಗಳು ನಿರಾಕರಿಸಿ ಮುಜುಗುರ ಉಂಟುಮಾಡಿದ್ದರು. ಆ ನ್ಯಾಯಮೂರ್ತಿಗಳು ಅಂತಿಮ ಐತೀರ್ಪು ನೀಡಿದ ನ್ಯಾಯಮಂಡಳಿಯಲ್ಲಿಯೂ ಇದ್ದರು. ನ್ಯಾಯಮಂಡಳಿಯ ಸದಸ್ಯ ನ್ಯಾಯಮೂರ್ತಿಗಳೊಬ್ಬರು ದಿಲ್ಲಿಯ ಕರ್ನಾಟಕ ಭವನದಲ್ಲಿ ತಂಗಿದ್ದಾಗ ಅವರ ಸಹಾಯಕರ ಜತೆ ಊಟ-ವಸತಿಯ ಬಿಲ್ ಪಾವತಿ ಬಗ್ಗೆ ಭವನದ ಅಕಾರಿಗಳು ಜಗಳಕ್ಕೆ ಇಳಿದಿದ್ದರು. ಇಷ್ಟು ಮಾತ್ರವಲ್ಲ ನ್ಯಾಯಮಂಡಳಿಯ ಸದಸ್ಯ ನ್ಯಾಯಮೂರ್ತಿಗಳಿಗೆ ತಮಿಳುನಾಡಿನಲ್ಲಿ ನೀಡಿರುವ ವಿಶೇಷ ಉಡುಗೊರೆಗಳ ವೀಡಿಯೊ ತುಣುಕುಗಳನ್ನು ಕರ್ನಾಟಕದ ಹಿರಿಯ ರಾಜಕಾರಣಿಯೊಬ್ಬರು ಬಹಿರಂಗಗೊಳಿಸಿ ವಿವಾದ ಸೃಷ್ಟಿಸಿದ್ದರು. ನ್ಯಾಯಮಂಡಳಿಯ ಪ್ರಥಮ ಅಧ್ಯಕ್ಷರು ರಾಜೀನಾಮೆ ನೀಡಲು ಇಂತಹ ಆಪಾದನೆಗಳೂ ಕಾರಣವೆನ್ನಲಾಗಿದೆ.

ಇಂತಹ ಸ್ವಯಂಕೃತ ಅಪರಾಧಗಳು ನಂತರದ ದಿನಗಳಲ್ಲಿಯೂ ಮುಂದುವರಿದಿತ್ತು. 2004ರಲ್ಲಿ ಒಂದು ದಿನ ನ್ಯಾಯಮಂಡಳಿಯ ಇಬ್ಬರು ಸದಸ್ಯ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯ ಪ್ರತ್ಯಕ್ಷ ದರ್ಶನಕ್ಕಾಗಿ ಪ್ರವಾಸ ಮಾಡಲು ಬಯಸಿದ್ದರು. ಇದನ್ನು ನ್ಯಾಯಮಂಡಳಿಯ ಅಧ್ಯಕ್ಷರು ವಿರೋಸಿದ್ದರು. ಇದು ನ್ಯಾಯಮಂಡಳಿಯೊಳಗೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಇಂತಹ ಸಂದರ್ಭ ದಲ್ಲಿ ನದಿಕಣಿವೆಯ ರಾಜ್ಯಗಳು ತಟಸ್ಥ ನಿಲುವು ತೆಗೆದುಕೊ ಳ್ಳಬೇಕಾಗುತ್ತದೆ. ತಮಿಳುನಾಡು, ಕೇರಳ ಮತ್ತು ಪುದುಚೇರಿಗಳು ತಟಸ್ಥವಾಗಿತ್ತು ಕೂಡಾ.

ಆದರೆ ಕರ್ನಾಟಕದ ಗಾಂ ಸಾಹಿತ್ಯ ಸಂಘ ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿ ಯೊಂದನ್ನು ಸಲ್ಲಿಸಿ ನ್ಯಾಯ ಮಂಡಳಿಯ ಇಬ್ಬರು ಸದಸ್ಯರ ಕಾವೇರಿ ಕಣಿವೆ ಪ್ರವಾಸವನ್ನು ರದ್ದುಗೊಳಿಸಬೇಕೆಂದು ಕೋರಿತು. ಅದು ಅಷ್ಟಕ್ಕೆ ನಿಲ್ಲಲಿಲ್ಲ. ರಾಜ್ಯ ಸರಕಾರ ವಿಶೇಷ ಅರ್ಜಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು ಮಾತ್ರವಲ್ಲ ಕಾವೇರಿ ನ್ಯಾಯಮಂಡಳಿಯನ್ನು ಪುನರ್ರಚಿಸಬೇಕೆಂದು ಕೋರಿ ಪ್ರಮಾಣಪತ್ರವನ್ನು ಕೂಡಾ ಸಲ್ಲಿಸಿತು. ಇದು ಕೇವಲ ಗಾಂ ಸಾಹಿತ್ಯ ಸಂಘದ ಕಿತಾಪತಿಯಲ್ಲ, ಇದರ ಹಿಂದೆ ರಾಜ್ಯದ ಹಿರಿಯ ಪ್ರಭಾವಿ ರಾಜಕಾರಣಿ ಇರುವುದು ನ್ಯಾಯಮಂಡಳಿಗೂ ಗೊತ್ತಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇದ್ದ ಕಾರಣದಿಂದಾಗಿ ಅದೇ ಪ್ರಭಾವಿ ರಾಜಕಾರಣಿ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಅವರ ಮೇಲೆ ಒತ್ತಡ ಹೇರಿ ರಾಜ್ಯ ಸರಕಾರ ಪ್ರಮಾಣಪತ್ರ ಸಲ್ಲಿಸುವಂತೆ ಮಾಡಿದ್ದರು.

 ಕಾವೇರಿ ಐತೀರ್ಪಿನ ಅಸೂಚನೆಗೆ ಕೇಂದ್ರ ಸರಕಾರ ಪ್ರಕಟನೆ ಹೊರಡಿಸಿದಾಗಲೂ ಇದೇ ರೀತಿಯ ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಯಿತು. ಐರ್ಪಿನ ಅಸೂಚನೆಯ ಪ್ರಕಟನೆ ಎಂದರೆ ‘ಶವದ ಪೆಟ್ಟಿಗೆಗೆ ಕೊನೆಯ ಮೊಳೆ’ ಎಂದು ಪ್ರಚಾರ ಮಾಡಲಾಯಿತು.‘ಅಸೂಚನೆ ಹೊರಡಿಸಿದರೂ ಅದು ಐತೀರ್ಪನ್ನು ಪ್ರಶ್ನಿಸುವ ಸಂಬಂತ ರಾಜ್ಯಗಳ ಹಕ್ಕು ಮತ್ತು ಈಗ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅಡ್ಡಿಯಾಗುವುದಿಲ್ಲ’ ಎಂದು ಸಾಕ್ಷಾತ್ ಸುಪ್ರೀಂಕೋರ್ಟ್ ಹೇಳಿದ ನಂತರ ‘ಶವದ ಪೆಟ್ಟಿಗೆಗೆ ಕೊನೆಯ ಮೊಳೆ’ ಆಗುವುದಾದರೂ ಹೇಗೆ? ಇಂತಹ ಅಪಾಯ ಇರುವುದೇ ನಿಜವಾಗಿದ್ದರೆ, 2007ರಲ್ಲಿ ಅಂತಿಮ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂಕೋಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಐತೀರ್ಪಿನ ಅಸೂಚನೆ ಪ್ರಕಟನೆಯನ್ನು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಯಾಕೆ ವಿರೋಸಿರಲಿಲ್ಲ ಎಂದು ಕಾವೇರಿ ವಿವಾದದ ನೆರೆಯಲ್ಲಿ ಮೀನು ಹಿಡಿಯಲು ಹೋದವರ್ಯಾರೂ ಪ್ರಶ್ನಿಸಲಿಲ್ಲ.

ಅಸೂಚನೆ ಹೊರಡಿಸುವುದರಿಂದ ಕರ್ನಾಟಕಕ್ಕೆ ಆಗಲಿರುವ ಬಹುದೊಡ್ಡ ಲಾಭ ಎಂದರೆ ಕಳೆದ 23 ವರ್ಷಗಳಿಂದ ನಮ್ಮ ಕೊರಳಿಗೆ ನೇಣಿನಂತೆ ಸುತ್ತಿಕೊಂಡಿರುವ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಐತೀರ್ಪಿನಿಂದ ಮುಕ್ತಿ. ಯಾವ ಕೋನದಿಂದ ಅಧ್ಯಯನ ನಡೆಸಿದರೂ ಮಧ್ಯಂತರ ಐತೀರ್ಪಿಗಿಂತ ಅಂತಿಮ ತೀರ್ಪು ಕರ್ನಾಟಕದ ರೈತರಿಗೆ ಹೆಚ್ಚು ಲಾಭವನ್ನುಂಟು ಮಾಡಲಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳದೆ ಇರಲಾಗದು.
ಹೌದು, ಅಂತಿಮ ಐತೀರ್ಪಿನಲ್ಲಿ ಎಲ್ಲವೂ ನಮ್ಮ ಪರವಾಗಿ ಇಲ್ಲ, ಸಾಕಷ್ಟು ಅನ್ಯಾಯವಾಗಿದೆ. ಸಂಕಷ್ಟದ ಕಾಲವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಯಲ್ಲಿ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ತಗ್ಗಿಲ್ಲ, ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಜನತೆಗೆ ಅವಶ್ಯ ಇರುವಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಪಾಲು ಒದಗಿಸಿಲ್ಲ, ಅಂತರ್ಜಲದ ನೆಪದಲ್ಲಿ ಕರ್ನಾಟಕದ ಚರಂಡಿ ನೀರನ್ನೂ ಲೆಕ್ಕ ಹಾಕಿರುವ ನ್ಯಾಯಮಂಡಳಿ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದಲ್ಲಿನ ಸುಮಾರು 50 ಟಿಎಂಸಿ ಅಂತರ್ಜಲದ ಬಗ್ಗೆ ಚಕಾರ ಎತ್ತಿಲ್ಲ.
 
1924ರ ಒಪ್ಪಂದದಿಂದ ಕರ್ನಾಟಕವನ್ನು ಮುಕ್ತಗೊಳಿಸಿದರೂ ಅದೇ ಒಪ್ಪಂದದ

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News