ಬೀದಿ ನಾಯಿ ದಾಳಿ: ಬೈಕ್‌ ಪಲ್ಟಿಯಾಗಿ ಯುವಕನ ಮೃತ್ಯು

Update: 2016-10-29 07:12 GMT

ತಿರುವನಂತಪುರಂ, ಅ. 29: ಕಚ್ಚಲು ಬಂದ ಬೀದಿನಾಯಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಬೈಕ್ ಓಡಿಸುತ್ತಿದ್ದ ಯುವಕ ನಿಯಂತ್ರಣಕಳಕೊಂಡು ಕಂಭವೊಂದಕ್ಕೆ ಢಿಕ್ಕಿಯಾಗಿ ಮೃತನಾದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ಕೊಚ್ಚುವೇಳಿ ತೈವಿಳಾಕಂ ಹೌಸ್‌ನ ಮನೊಲಿನ್ ಸೇವಿಯರ್ (28) ಎಂಬ ಯುವಕನನ್ನು ಬೀದಿ ನಾಯಿ ಓಡಿಸಿ ಕೊಂಡು ಬಂದಿತ್ತು. ಅದರಿಂದ ಪಾರಾಗಲು ಯತ್ನಿಸಿದ ಸಂದರ್ಭದಲ್ಲಿ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದರು.

ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆಫಲಕಾರಿಯಾಗದೆ ಮೃತರಾಗಿದ್ದಾರೆ. ಪಾರ್ಥಿವ ದೇಹದ ಸಂಸ್ಕಾರ ಕಾರ್ಯಕ್ರಮ ಇಂದು ಕೊಚ್ಚುವೇಳಿ ಜೋಸೆಫ್ ದೇವಾಲಯದಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News