×
Ad

ಉತ್ತರ ಪ್ರದೇಶದಲ್ಲಿ ವಿಕಾಸ್ ರಥ ಯಾತ್ರೆಯ ವೇಳೆ ಎಸ್‌ಪಿ ಕಾರ್ಯಕರ್ತರ ನಡುವೆ ಘರ್ಷಣೆ

Update: 2016-11-03 11:35 IST

ಲಕ್ನೋ, ನ.3: ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನ ಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಂದು  ಕೈಗೊಂಡಿರುವ  ವಿಕಾಸ್ ರಥ ಯಾತ್ರೆಯ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತರು  ಪರಸ್ಪರ ಹೊಡೆದಾಡಿಕೊಂಡ ಘಟನೆ ಲಕ್ನೋದಲ್ಲಿ ನಡೆಯಿತು.
ನಾಯಕರ ಎದುರಿನಲ್ಲೆ  ಕಾರ್ಯಕರ್ತರು ಬಡಿದಾಡಿಕೊಂಡರು ಎಂದು ತಿಳಿದುಬಂದಿದೆ.
ವಿಕಾಸ್ ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ  ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್‌ ಯಾದವ್‌ , ಚಾಲನೆ ನೀಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮುಲಾಯಂ ಸಿಂಗ್‌ ಯಾದವ್‌  ಅವರೊಂದಿಗೆ ಅವರ ಚಿಕ್ಕಪ್ಪ ಅಖೀಲೇಶ್‌ ಯಾದವ್‌  ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.  . ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು ಸಮಾಜವಾದಿ ಪಕ್ಷದ ಹಾದಿ ದುರ್ಗಮವಾಗಿದೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್ ಕೈ ಬಲಪಡಿಸುವಂತೆ ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News