ಕೆಟ್ಟು ನಿಂತ ವಿಕಾಸ್ ರಥ ..!
Update: 2016-11-03 08:43 GMT
ಲಕ್ನೊ, ನ.3: ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಹೊರಟಿರುವ ವಿಕಾಸ್ ರಥ ಯಾತ್ರೆಗೆ ಆರಂಭದಲ್ಲೇ ಅಡ್ಡಿ ಉಂಟಾಗಿದೆ, ವಿಕಾಸ ರಥ ಯಾತ್ರೆ ಹೊರಟು ಒಂದು ಕಿ.ಮೀ ದೂರ ಸಾಗುವಷ್ಟರಲ್ಲಿ ರಥ ಯಾತ್ರೆಯ ಬಸ್ಸು ಕೆಟ್ಟು ನಿಂತಿದೆ. ಬಳಿಕ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತಿತರರು ಬೇರೆ ವಾಹನದಲ್ಲಿ ಪ್ರಯಾಣಿಸಿದರು.
ವಿಕಾಸ ರಥಯಾತ್ರೆಯಲ್ಲಿ ಹಿಂದೆ ಕಚ್ಚಾಡಿಕೊಂಡಿದ್ದ ಸಮಾಜವಾದಿ ಪಕ್ಷದ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.