ಸುಶಾಂತ್-ರಣವೀರ್ ಶೀತಲ ಸಮರ

Update: 2016-11-20 12:57 GMT

ಬಾಲಿವುಡ್ ಚಿತ್ರದಲ್ಲಿ ತಾರೆಯರ ನಡುವೆ ಶೀತಲ ಸಮರ ಸಾಮಾನ್ಯ. ಇದಕ್ಕೆ ಹೊಸಪೀಳಿಗೆಯ ನಾಯಕನಟರೂ ಹೊರತಲ್ಲ. ಇದೀಗ ಸುಶಾಂತ್‌ಸಿಂಗ್ ಹಾಗೂ ರಣವೀರ್‌ಸಿಂಗ್ ನಡುವೆ ಅಸಮಾಧಾನ ಹೊಗೆಯಾಡು ತ್ತಿದೆಯೆಂಬ ವದಂತಿಗಳು ಬಾಲಿವುಡ್ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿವೆ.

 ಖ್ಯಾತ ನಿರ್ಮಾಪಕ, ನಿರ್ದೇಶಕ ಆದಿತ್ಯ ಚೋಪ್ರಾ ತನ್ನ ಬೇಫಿಕ್ರ್ ಚಿತ್ರದಿಂದ ಸುಶಾಂತ್‌ಸಿಂಗ್‌ಗೆ ಕೈಬಿಟ್ಟಿರುವುದೇ ಸುಶಾಂತ್ ಹಾಗೂ ರಣವೀರ್‌ಸಿಂಗ್ ನಡುವೆ ಇದ್ದ ಆತ್ಮೀಯ ಬಾಂಧವ್ಯ ಹಳಸಲು ಕಾರಣವಂತೆ. ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಬೇಫಿಕ್ರ್‌ನಲ್ಲಿ ಸುಶಾಂತ್‌ಗೆ ಅವಕಾಶ ನೀಡುವುದಾಗಿ ಆದಿತ್ಯ ಬಹಳ ಸಮಯದ ಹಿಂದೆಯೇ ಮಾತುಕೊಟ್ಟಿದ್ದರಂತೆ. ಆದರೆ ಈಗ ತನಗೆ ಖೊಕ್ ನೀಡಿ, ರಣವೀರ್‌ಸಿಂಗ್‌ಗೆ ಚಿತ್ರದಲ್ಲಿ ಚಾನ್ಸ್ ನೀಡಿರುವುದರಿಂದ ಸುಶಾಂತ್ ಕೆಂಡಾಮಂಡಲವಾಗಿದ್ದಾರೆ. ಆತ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ರಣವೀರ್‌ಸಿಂಗ್ ಜೊತೆ ಶೀತಲಸಮರವನ್ನು ಶುರುಹಚ್ಚಿಕೊಂಡಿದ್ದಾರೆ.

ಹಾಗೆ ನೋಡಿದರೆ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ರಾಮ್‌ಲೀಲಾ’ ಚಿತ್ರಕ್ಕೂ ಮೊದಲಿಗೆ ಸುಶಾಂತ್‌ಸಿಂಗ್ ಆಯ್ಕೆಯಾಗಿದ್ದರು. ಆದರೆ ಆಗ ಅರು ಇನ್ನೆರಡು ಚಿತ್ರಗಳಲ್ಲಿ ಸುಶಾಂತ್ ಬ್ಯುಸಿಯಾಗಿದ್ದ ಕಾರಣ, ಬನ್ಸಾಲಿಗೆ ಡೇಟ್ಸ್ ನೀಡಲಾಗಲಿಲ್ಲ. ಆನಂತರ ಈ ಚಿತ್ರವು ರಣವೀರ್‌ಸಿಂಗ್ ಪಾಲಾಗಿತ್ತು.

ಎರಡು ತಿಂಗಳುಗಳ ಹಿಂದೆ ಬಿಡುಗಡೆಯಾದ ಸುಶಾಂತ್‌ಸಿಂಗ್ ಅಭಿನಯದ ‘ಎಂ.ಎಸ್.ಧೋನಿ’ ಚಿತ್ರವು ಭರ್ಜರಿ ಯಶಸ್ಸು ಕಂಡಿದೆ. ಧೋನಿ ಚಿತ್ರದ ಗೆಲುವು ಸುಶಾಂತ್‌ಗೆೆ ಬಾಲಿವುಡ್‌ನಲ್ಲಿ ಹೊಸ ಇಮೇಜ್ ತಂದುಕೊಟ್ಟಿದೆ. ಮಾತ್ರವಲ್ಲ ಹೊಸ ಅವಕಾಶಗಳ ಹೆಬ್ಬಾಗಿಲನ್ನು ತೆರೆದುಕೊಟ್ಟಿದೆ.ಸಾಮಾನ್ಯವಾಗಿ ಇತರ ಬಾಲಿವುಡ್ ಚಿತ್ರಗಳ ಬಗ್ಗೆ ಉದಾರವಾಗಿ ಟ್ವೀಟಿಸುವ ರಣವೀರ್, ‘ಎಂ.ಎಸ್.ಧೋನಿ’ ಚಿತ್ರದ ಕುರಿತು ಒಂದೇ ಒಂದು ಮಾತನ್ನು ಆಡಿಲ್ಲ. ಒಟ್ಟಿನಲ್ಲಿ ರಣವೀರ್-ಸುಶಾಂತ್ ನಡುವಿನ ಕೋಲ್ಡ್‌ವಾರ್ ಬಾಲಿವುಡ್‌ನಲ್ಲಿ ಈಗ ಬಿಸಿಬಿಸಿ ಚರ್ಚೆಯ ವಿಷಯವಾಗಿ ಬಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News