ಪ್ರೀತಿಸಿದ್ದನ್ನು ವಿರೋಧಿಸಿದ ತಂದೆ,ತಾಯಿ,ಸಹೋದರಿಯನ್ನು ಕೊಂದ ಯುವಕ

Update: 2016-11-30 12:29 GMT

ಚೆನ್ನೈ, ನವೆಂಬರ್ 30: ದಲಿತ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನೊಬ್ಬ ಅದಕ್ಕಾಗಿ ತನ್ನನ್ನು ವಿರೋಧಿಸಿದ ತಂದೆ,ತಾಯಿ ಸಹೋದರಿಯರ ಕೊರಳು ಕೊಯ್ದು ಕೊಂದದ್ದಲ್ಲದೆ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳ್ನಾಡಿನ ವೆಲ್ಲೂರ್ ಜಿಲ್ಲೆಯ ತಿರಿಪ್ಪಟ್ಟೂರ್ ತಾಲೂಕಿನ ಕಾಕ್ಕಾನ್ ಕರೈ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಮಿಳರಸನ್(25) ಎಂಬ ಯುವಕ ಈ ದುಷ್ಕೃತ್ಯವೆಸಗಿ ಆತ್ಮಹತ್ಯೆಗೆ ಶ್ರಮಿಸಿದ್ದು, ಆತನ ಆರೋಗ್ಯಸ್ಥಿತಿ ಚಿಂತಾಜನಕವಾಗಿದೆ. ತಮಿಳ್ನಾಡ ವಿದ್ಯುತ್ ಇಲಾಖೆಯ ಉದ್ಯೋಗಿ ಮೋಹನ್(57),ಅವರ ಪತ್ನಿ ರಾಜೇಶ್ವರಿ(55), ಪುತ್ರಿ ಸುಕನ್ಯ(22) ಯುವಕನಿಂದ ಹತ್ಯೆಯಾದ ದುರದೃಷ್ಟವಂತರೆಂದು ಗುರುತಿಸಲಾಗಿದೆ. ಇವರನ್ನು ಕೊಲೆಗೈದ ಬಳಿಕ ತಲೆಗೆ ಹೊಡೆದು ಸ್ವಯಂ ಆತ್ಮಹತ್ಯೆಗೆ ಶ್ರಮಿಸಿದ್ದಾನೆ.

ತಲೆಗೆ ಗಂಭೀರ ಗಾಯಗಳಾಗಿದ್ದು ತಿರುಪ್ಪಟ್ಟೂರ್ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ತಮಿಳರಸನ್ ಅದೇ ಸಂಸ್ಥೆಯಲ್ಲಿ ದುಡಿಯುತ್ತಿದ್ದ ದಲಿತ ಯುವತಿಯನ್ನು ಪ್ರೀತಿಸುತ್ತಿದ್ದ. ಇವರಿಬ್ಬರನ್ನು ಬೇರೆ ಬೇರೆ ಮಾಡಲು ತಮಿಳರಸನ್ ಕುಟುಂಬ ಯತ್ನಿಸಿತ್ತು. ಇದರಿಂದ ತನ್ನ ಕುಟುಂಬದ ವಿರುದ್ಧ ತಮಿಳರಸನ್ ಕೋಪಗೊಂಡಿದ್ದ. ತಂದೆಯಿಂದ ಪಡೆದಿದ್ದ ಎರಡುಲಕ್ಷರೂಪಾಯಿಯನ್ನು ಅವರು ಮರಳಿ ಕೇಳಿದ್ದು ಅವನನ್ನು ಇನ್ನಷ್ಟು ಕುಪಿತಗೊಳಿಸಿತ್ತು.

ದಲಿತ ಹುಡುಗಿಯನ್ನುವಿವಾಹವಾದರೆ ಕುಟುಂಬದ ಆಸ್ತಿಯೆಲ್ಲವನ್ನೂ ಮಗಳ ಹೆಸರಿಗೆ ಬರೆಯುವೆ ಎಂದು ತಂದೆ ಬೆದರಿಸಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಕಳೆದ ದಿವಸ ಬೆಳಗ್ಗೆ ನಿದ್ರೆಯಲ್ಲಿದ್ದ ಸಹೋದರಿ ಮತ್ತು ತಾಯಿ ರಾಜೇಶ್ವರಿ ಕೊರಳನ್ನು ಸೀಳಿಹಾಕಿ ಕೊಂದಿದ್ದ ನಂತರ ಚಪ್ಪಡಿ ಕಲ್ಲು ಎತ್ತಿಹಾಕಿ ಮುಖವನ್ನು ವಿಕೃತಗೊಳಿಸಿದ್ದಾನೆ. ತಂದೆ ಮೋಹನ್ ಕೆಲಸ ಮುಗಿಸಿ ಬೆಳಗ್ಗೆ ಬಂದಾಗ ಅವರ ಕೊರಳಿಗೂ ಮಚ್ಚಿನಿಂದ ಹೊಡೆದು ಸಾಯಿಸಿದ್ದಾನೆ. ನಂತರ ಆತ ಸ್ವಯಂ ಆತ್ಮಹತ್ಯೆಗೆ ಶ್ರಮಿಸಿದ್ದಾನೆ.

ಮನೆಯಿಂದ ಬೆಳ್ಳಂಬೆಳಗ್ಗಿನ ಬೊಬ್ಬೆ ಕೇಳಿಸಿಕೊಂಡಿದ್ದ ನೆರೆಯವರು ನಂತರ ಅಲ್ಲಿಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದ ಕುಟುಂಬದ ಸದಸ್ಯರನ್ನು ನೋಡಿದ್ದಾರೆ. ನಾಲ್ವರನ್ನೂ ಆವರು ಆಸ್ಪತ್ರೆಗೆ ಸೇರಿಸಿದರೂ ತಂದೆ, ತಾಯಿ, ಸಹೋದರಿ ಅಷ್ಟರಲ್ಲೆ ಮೃತಳಾಗಿದ್ದರು. ತಮಿಳರಸನ್ ಮಾತ್ರ ಸಾವಿನೊಂದಿಗೆ ಹೋರಾಟ ನಡೆಸುತ್ತಿದ್ದಾನೆ. ಆತನು ತಿಳಿಸಿದ್ದರಿಂದ ಈ ನಿಷ್ಠುರ ಕೃತ್ಯ ಬಯಲಿಗೆ ಬಂದಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News