×
Ad

ಅಮ್ಮ ನಿಧನರಾದಾಗ ರಜೆಕೇಳಿದ ಆದಿವಾಸಿ ಕಂಡಕ್ಟರ್‌: ರಾಜ್ಯದ ಹೊರಗೆ ಡ್ಯೂಟಿ ಹಾಕಿದ ಕೆಎಸ್ಸಾರ್ಟಿಸಿ

Update: 2016-12-14 13:56 IST

ಕಾಸರಗೋಡು, ಡಿ. 14: ಅಮ್ಮ ನಿಧನರಾಗಿದ್ದರಿಂದ ರಜೆಕೇಳಿದ ಕೆಎಸ್ಸಾರ್ಟಿಸಿ ನಿರ್ವಾಹಕನಿಗೆ ರಾಜ್ಯದ ಹೊರಗೆ ಡ್ಯೂಟಿ ಹಾಕಿದ ಸಖೇದಾಶ್ಚರ್ಯದ ಘಟನೆ ವರದಿಯಾಗಿದೆ. ಪನತ್ತಡಿ ಚಾಮುಂಡಿಕುನ್ನ್ ಎಂಬಲ್ಲಿನ ಆದಿವಾಸಿ ವ್ಯಕ್ತಿಯಾದ ಟಿ.ವೇಣುಗೆ ಇಲಾಖೆಯಿಂದ ಈ ಅನುಭವವಾಗಿದೆ.ಕಳೆದ ನವೆಂಬರ್ 12ಕ್ಕೆ ವೇಣುರ ಅಮ್ಮ ಯಶೋದಾಬಾಯಿ ನಿಧನರಾಗಿದ್ದರು. ಎಂಡೋಸಲ್ಫಾನ್ ಪೀಡಿತೆ ಮತ್ತು ಮೂರುವರ್ಷಗಳಿಗಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಯಶೋದಬಾಯಿ ನವೆಂಬರ್ 12 ಸೋಮವಾದಂದು ಬೆಳಗ್ಗೆ ಕೊನೆಯುಸಿರೆಳಿದಿದ್ದರು. ರವಿವಾರ 8:30ಕ್ಕೆ ಕಾಸರಗೋಡು ಡಿಪ್ಪೊದಲ್ಲಿ ಡ್ಯೂಟಿಗೆ ಬಂದಿದ್ದ ವೇಣು ಅವರ ಕೆಲಸ ಸೋಮವಾರ ಬೆಳಗ್ಗೆ ಹತ್ತುಗಂಟೆಗೆ ಕೊನೆಗೊಂಡಿತ್ತು. ಆಫೀಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಅಮ್ಮನ ಅಸೌಖ್ಯದ ಸುದ್ದಿ ವೇಣುಗೆ ತಿಳಿದು ಬಂದಿತ್ತು. ಕೂಡಲೇ ಮನೆಗೆ ಬರಬೇಕೆಂದು ಸಂಬಂಧಿಕರುವೇಣುಗೆ ಫೋನ್ ಮಾಡಿದ್ದರು. ವಿಷಯವನ್ನು ಸ್ಟೇಶನ್ ಮಾಸ್ಟರ್ ಮತ್ತು ಕಂಟ್ರೋಲಿಂಗ್ ಇನ್ಸ್‌ಪೆಕ್ಟರ್‌ಗೆ ತಿಳಿಸಿದರು ಬದಲಿ ಕಂಡಕ್ಟರ್‌ನನ್ನು ನೀನೇ ಏರ್ಪಾಟು ಮಾಡಬೇಕು ಎಂದು ಮೇಲಧಿಕಾರಿಗಳು ಉತ್ತರಿಸಿ ವೇಣುವನ್ನು ವ್ಯಂಗ್ಯಮಾಡಿದ್ದರು ಎಂದು ವೇಣು ಹೇಳುತ್ತಿದ್ದಾರೆ.

ರಜೆ ನಿರಾಕರಿಸಿದ್ದಲ್ಲದೆ ವೇಣುಗೆ ಮಂಗಳೂರಿಗೆ ಡ್ಯೂಟಿ ಹಾಕಲಾಯಿತು. ಬಸ್ ಮಂಗಳೂರಿನ ತೊಕ್ಕೊಟ್ಟು ತಲುಪಿದಾಗ ಅಮ್ಮ ನಿಧನರಾಗಿದ್ದಾರೆ. ಮೃತದೇಹವವನ್ನು ಏನು ಮಾಡಬೇಕೆಂದು ಸಂಬಂಧಿಕರು ಕೇಳಿದರು. ತಾನು ಬಂದ ಬಳಿಕ ಮೃತದೇಹ ತೆಗೆದರೆ ಸಾಕೆಂದು ವೇಣು ಹೇಳಿದರು. ಬಸ್ ಮಂಗಳೂರಿನಿಂದ ಮರಳಿಕಾಸರಗೋಡಿಗೆ ಬಂದಿದ್ದರು. ಬಸ್ ಚಾಲಕ ವೇಣುವಿನ ಮನೆ 65ಕಿ.ಮೀ. ದೂರದಲ್ಲಿದೆ ಅವರಿಗೆ ಮನೆಗೆ ಹೋಗಲು ಕೆಎಸ್ಸಾರ್ಟಿಸಿಯ ಕಚೇರಿ ವಾಹನ ಕೊಡಬೇಕೆಂದು ವಿನಂತಿಸಿದರೂ ಮೇಲಧಿಕಾರಿಗಳು ಕೊಡಲಿಲ್ಲ.

 ಹೀಗೆ ಸಂಜೆ ಆರುಗಂಟೆಗೆ ವೇಣು ಮನೆಗೆ ತಲುಪಿದ್ದರು. ಆನಂತರವೇ ಅವರ ಅಮ್ಮನ ಶವಸಂಸ್ಕಾರ ನಡೆದಿತ್ತು. ವೇಣುನ ಪತ್ನಿಯ ತಂದೆ ಮತ್ತು ಕಾಂಙಂಗಾಡ್ ಎಎಸ್ಸಾರ್ಟಿಸಿ ನೌಕರ ಬಾಲಕೃಷ್ಣರಿಗೂರಜೆ ನಿರಾಕರಿಸಲಾಗಿತ್ತು. ಅದೇವೇಳೆ ವೇಣು ಸಹೋದರ ಎ.ಆರ್. ಕ್ಯಾಂಪ್‌ನ ಪೊಲೀಸ್ ದಾಮೋದರನಿಗೆ ತಾಯಿ ನಿಧನ ಸುದ್ದಿ ತಿಳಿದಾಗ ಪೊಲೀಸ್ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸಲಾಗಿತ್ತು.

 ಪನತ್ತಡಿ ಪ್ಲಾಂಟೇಶನ್ ಸಮೀಪದಲ್ಲಿ ಯಶೋದಾಬಾಯಿ ಮನೆಯಿದೆ. ಎಂಡೊಸಲ್ಫಾನ್ ಪೀಡಿತೆಯಾಗಿದ್ದರೂ ಮೆಡಿಕಲ್ ಕ್ಯಾಂಪ್‌ನಲ್ಲಿ ಭಾಗವಹಿಸದ್ದರಿಂದ ಎಂಡೊ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಹೃದ್ರೋಗ ಇದ್ದುದರಿಂದ ಅವರಿಗೆ ಶಸ್ತ್ರಕ್ರಿಯೆಯನ್ನೂ ಮಾಡಿರಲಿಲ್ಲ. ಈಗ ವೇಣು ತನ್ನೊಂದಿಗೆ ತೋರಿಸಲಾದ ಅನ್ಯಾಯದ ವಿರುದ್ಧ ದೂರು ಸಲ್ಲಿಸಲು ಯೂನಿಯನ್‌ನೊಂದಿಗೆ ಸಮಾಲೋಚಿಸುತ್ತಿದ್ದೇನೆ ಎಂದು ವೇಣು ಹೇಳಿದ್ದಾರೆ.

ಆದರೆ, ವೇಣುಗೆ ರಜೆ ನೀಡಿದ್ದೇವೆ. ಅಮ್ಮನ ಮೃತದೇಹ ಸಂಸ್ಕಾರ ಕ್ರಿಯೆಯಲ್ಲಿ ವೇಣು ಭಾಗವಹಿಸಿದ್ದಾರೆ ಎಂದು ಕೆಎಸ್ಸಾರ್ಟಿಸಿ ಸ್ಟೇಶನ್ ಮಾಸ್ಟರ್‌ರ ಆಫೀಸ್‌ನಿಂದ ಪ್ರತಿಕ್ರಿಯೆ ದೊರಕಿದೆ. ಇಂತಹ ಘಟನೆಯಾದಾಗ ರಜೆ ನಿರಾಕರಿಸುವ ರೂಢಿಯಿಲ್ಲ. ಮಾನವೀಯ ನೆಲೆಯಲ್ಲಿನಿಲುವನ್ನು ಕೈಗೊಳ್ಳಲಾಗುತ್ತದೆ ಎಂದು ಕಚೇರಿ ಮೂಲಗಳು ಹೇಳಿವೆ ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News