ಕಣ್ಣೂರಿನಲ್ಲಿ ಸಿಪಿಐ ಕಚೇರಿಗೆ ದುಷ್ಕರ್ಮಿಗಳಿಂದ ದಾಳಿ

Update: 2017-01-07 13:12 GMT

ಕಣ್ಣೂರ್, ಜ.7: ಕೇರಳದ ಕಣ್ಣೂರಿಗೆ ಸಮೀಪದ ಪರಶ್ಶಿನ ಕಡವ್ ಸಿಪಿಐ ಕಚೇರಿಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದು ಕೆಳ ಅಂತಸ್ತಿನಲ್ಲಿರುವ ಸಿಪಿಐ ಸ್ಥಳೀಯ ಶಾಖಾ ಸಮಿತಿ ಕಚೇರಿಯ ಎಂಟು ಕಿಟಕಿ ಬಾಗಿಲುಗಳನ್ನು ಪುಡಿಗೈಯ್ಯಲಾಗಿದೆ.

ಕಳೆದ ದಿವಸ ಕಾನಂ ರಾಜೇಂದ್ರನ್ ಉದ್ಘಾಟಿಸಿದ ಕೆ.ವಿ. ಮೂಸನ್‌ಕುಟ್ಟಿ ಸ್ಮಾರಕ ಮಂದಿರ ಈಗ ದುಷ್ಕರ್ಮಿಗಳ ಆಕ್ರೋಶಕ್ಕೆ ತುತ್ತಾಗಿದ್ದು, ಕಾನಂ ರಾಜೇಂದ್ರನ್ ಗೃಹ ಇಲಾಖೆಯ ವಿರುದ್ಧ ಭಾಷಣ ಮಾಡಿದ್ದರು. ಇದು ಕಚೇರಿ ದಾಳಿಗೆ ದುಷ್ಕರ್ಮಿಗಳನ್ನುಪ್ರೇರೇಪಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News