ಜಮ್ಮು-ಕಾಶ್ಮೀರದಲ್ಲಿ ಮತ್ತೆ ಹಿಮಪಾತ:ಐವರು ಯೋಧರು ಸಿಲುಕಿರುವ ಶಂಕೆ
Update: 2017-01-28 13:32 IST
ಶ್ರೀನಗರ, ಜ.28: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿರುವ ಸೇನಾ ಶಿಬಿರದಲ್ಲಿ ಶನಿವಾರ ಸಂಭವಿಸಿದ ಭಾರೀ ಹಿಮಪರ್ವತ ಕುಸಿತದಲ್ಲಿ ಐವರು ಸೈನಿಕರು ಸಿಲುಕಿಹಾಕಿಕೊಂಡಿರುವ ಶಂಕೆಯಿದೆ.
ಯೋಧರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಕಳೆದ 4 ದಿನಗಳ ಅಂತರದಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರನೆ ಬಾರಿ ಹಿಮಪಾತ ಸಂಭವಿಸಿದೆ.
ಜಮ್ಮು-ಕಾಶ್ಮೀರದ ಹಲವೆಡೆ ಭೂಕುಸಿತ ಹಾಗೂ ಹಿಮಪಾತದಿಂದಾಗಿ ಸತ್ತವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಹಿಮಪಾತದಲ್ಲಿ ಸುಮಾರು 14 ಸೈನಿಕರು ಮೃತಪಟ್ಟಿದ್ದಾರೆ.