ಬನ್ಸಾಲಿ ಮೇಲಿನ ಹಲ್ಲೆಗೆ ಅತ್ಯಂತ ವಿಶಿಷ್ಟವಾಗಿ ಪ್ರತಿಭಟಿಸಿದ ಸುಶಾಂತ್ ಸಿಂಗ್

Update: 2017-01-29 15:48 GMT

ಮುಂಬೈ, ಜ.29: ಹಿಂದಿ ಸಿನೆಮಾ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಮೇಲೆ ‘ಶ್ರೀ ರಜಪೂತ್ ಕರ್ಣಿ ಸೇನಾ’ ಸಂಘಟನೆಯ ಸದಸ್ಯರು ಹಲ್ಲೆ ನಡೆಸಿರುವುದನ್ನು ಪ್ರತಿಭಟಿಸಿ, ತಮ್ಮ ಹೆಸರಿನ ಉಪನಾಮವಾದ ರಜಪೂತ್ ಅನ್ನು ಕೈಬಿಡುವುದಾಗಿ ಸಿನೆಮಾ ನಟ ಸುಷಾಂತ್ ಸಿಂಗ್ ರಜಪೂತ್ ತಿಳಿಸಿದ್ದಾರೆ.

 ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತಮ್ಮ ಹೆಸರಿನ ಜೊತೆಗಿದ್ದ ರಜಪೂತ್ ಎಂಬ ಉಪನಾಮವನ್ನು ಕೈಬಿಟ್ಟಿರುವುದಾಗಿ ಸುಷಾಂತ್ ಸಿಂಗ್ ತಿಳಿಸಿದ್ದಾರೆ.

ಈ ಉಪನಾಮ ಹೊಂದಿರುವ ಎಲ್ಲರೂ ಈ ದುರದೃಷ್ಟಕರ ಘಟನೆಯನ್ನು ಬೆಂಬಲಿಸುತ್ತಾರೆ ಎಂದು ಭಾವಿಸಬಾರದು. ಈ ಹಲ್ಲೆಕೋರರು ಅಖಂಡ ರಜಪೂತ್ ಸಮುದಾಯದ ಪ್ರತಿನಿಧಿಗಳಲ್ಲ. ನಿಮ್ಮ ಚಿಂತನೆಗಳನ್ನು ವ್ಯಕ್ತಪಡಿಸಲು ಒಂದು ರೀತಿಯಿದೆ. ಆದರೆ ಹಿಂಸೆ ಎಲ್ಲಕ್ಕೂ ಉತ್ತರವಲ್ಲ. ಅದೂ ಕೇವಲ ಒಂದು ಊಹೆಯ ಮೇಲೆ ನಡೆಯುವ ಹಿಂಸಾಚಾರ ಖಂಡಿತಾ ಸಮರ್ಥನೀಯವಲ್ಲ ಎಂದು ತಿಳಿಸಲು ತಾನು ಹೀಗೆ ಮಾಡಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News