×
Ad

ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಯಾವುದೇ ತೆರಿಗೆ ಇಲ್ಲ

Update: 2017-02-01 11:15 IST

ಹೊಸದಿಲ್ಲಿ, ಫೆ.1: ಕೇಂದ್ರ ಹಣಕಾಸು ಸಚಿವ  ಅರುಣ್ ಜೇಟ್ಲಿ 2017-18ನೆ ಸಾಲಿನ ಕೇಂದ್ರ ಬಜೆಟ್ ನ್ನು ಲೋಕಸಭೆಯಲ್ಲಿ ಇಂದು ಮಂಡಿಸಿದರು.ಸಚಿವ ಜೇಟ್ಲಿ ನಾಲ್ಕನೆ ಬಜೆಟ್‌ ಮಂಡಿಸಿದರು.

ಮುಖ್ಯಾಂಶಗಳು

*ಮೊದಲ ಬಾರಿ  ಸಾಮಾನ್ಯ ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನ

*ಎರಡಂಕೆಯ ಹಣದುಬ್ಬರ ನಿಯಂತ್ರಣ.

*ಉದ್ಯೋಗ ಕ್ಷೇತ್ರದಲ್ಲಿ  ಯುವ ಶಕ್ತಿ ಬಲವರ್ಧನೆಗೆ ಕ್ರಮ
* ಸಾರ್ವಜನಿಕ  ಹಣ ಸದುಪಯೋಗ ಪಡಿಸಲು ಕ್ರಮ

*ಭಾರತ   ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ.

*ಭಾರತ ವಿದೇಶಿ ಹೂಡಿಕೆಯಲ್ಲಿ ಗಮನಾರ್ಹ ಸಾಧನೆ 

* ಆರ್ಥಿಕ  ಸ್ಥಿತಿ  ಅಭಿವೃದ್ಧಿಗೆ ನೋಟು ರದ್ಧತಿ ಪೂರಕ.

*ನೋಟು ರದ್ಧತಿಯಿಂದ  ಅರ್ಥವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಯಾಗಿದೆ

*ವಿದೇಶಿ ವಿನಿಮಯದಲ್ಲಿ ಭಾರೀ ಬದಲಾವಣೆ.

*ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ

*ನೋಟು ಅಮಾನ್ಯೀಕರಣ ಲಾಭ ಬಡಜನರಿಗೆ ವರ್ಗಾವಣೆಗೆ  ನಿರ್ಧಾರ,. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೂಡಿಕೆ.

* ನೋಟು ಬ್ಯಾನ್ ನಿಂದ ಬ್ಯಾಂಕ್ ಸಾಲ ಕಡಿಮೆಯಾಗಿದೆ.

*ಸಣ್ಣ  ಮತ್ತು ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು.
* ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.
*ಫಸಲ್ ವಿಮಾ ಯೋಜನೆಯಲ್ಲೂ ರೈತರಿಗೆ ನೆರವು
*ಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ

*ಹೈನುಗಾರಿಕಾ ಅಭಿವೃದ್ಧಿಗೆ   8 ಸಾವಿರ ಕೋಟಿ ರೂ.
*ಗುಡಿಸಲು ಮುಕ್ತ ಭಾರತ ಯೋಜನೆಯಡಿ 1 ಕೋಟಿ ಮನೆ ನಿರ್ಮಾಣ
* ನೀರಾವರಿಗಾಗಿ ಧೀರ್ಘಾವಧಿ ಸಾಲ
*ಮನ್ರೆಗಾ ಫಂಡ್  ವಿಸ್ತರಣೆ , 48 ಸಾವಿರ ಕೋಟಿ ರೂ. ಹೆಚ್ಚಳ 

*ಕೃಷಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ನಿರ್ಧಾರ

*1.50 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್  ಸೌಲಭ್ಯ

*ಪರಿಶಿಷ್ಟ ಜಾತಿ ಅಭಿವೃಧ್ದಿಗೆ 53 ಸಾವಿರ ಕೋಟಿ ರೂ.

*2019ರ ಒಳಗಾಗಿ ಹಳ್ಳಿಗಳಲ್ಲಿ ಬಡತನ ನಿವಾರಣೆಗೆ ಕ್ರಮ
,*2018ರ ವೇಳೆಗೆ  ಶೇ 100ರಷ್ಟು  ಗ್ರಾಮೀಣ ವಿದ್ಯುದ್ದೀಕರಣ 

*ವಿದ್ಯುತ್ ಯೋಜನೆಗಾಗಿ  ನಾಲ್ಕವರೆ ಸಾವಿರ ಕೋಟಿ ರೂ. ಯೋಜನೆ

* ಮನ್ ರೆಗಾ ಯೋಜನೆಯಡಿ  ಹಳ್ಳಿಗಳಲ್ಲಿ 10 ಲಕ್ಷ ಕೆರೆ ನಿರ‍್ಮಾಣ
*ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ

*ಮಹಿಳಾ ಶಕ್ತಿ ಕೇಂದ್ರ ಸ್ಥಾಪನೆಗೆ 500 ಕೋಟಿ ರೂ.

*ಗರ್ಭಿಣಿ ಮಹಿಳೆಯರಿಗೆ 6000 ರೂ. ಸಹಾಯಧನ

*ಗ್ರಾಮೀಣ ಶಿಕ್ಷಣಕ್ಕೆ ತಂತ್ರಜ್ಞಾನ ಬಳಕೆ

*ಎಲ್ಲ ಪ್ರವೇಶ ಪರೀಕ್ಷೆಗಳಿಗೆ ಒಂದೇ ಪ್ರಾಧಿಕಾರ

*ಎಲ್ಲ ಕಾಲೇಜುಗಳಿಗೆ ಸ್ವಾಯತ್ತತೆ 

*ಟೆಕ್ಸ್ ಟೈಲ್ ಕ್ಷೇತ್ರಗಳಲ್ಲಿ  ಉದ್ಯೋಗ ಸೃಷ್ಟಿ ಯೋಜನೆ.

* ಹಿರಿಯ ನಾಗರಿಕರಿಕರಿಗೆ ಆರೋಗ್ಯ ಕಾರ್ಡ್

*ಜಾರ್ಖಂಡ್, ಗುಜರಾತ್ ನಲ್ಲಿ ಎರಡು ಏಮ್ಸ್ ಕೇಂದ್ರ  ಆರಂಭ

*ಆಧಾರ ಯೋಜನೆ ಆಧಾರದಲ್ಲಿ ಆರೋಗ್ಯ ಕಾರ್ಡ್ ಯೋಜನೆ.

*ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ  ಆದ್ಯತೆ, 64 ಸಾವಿರ ಕೋಟಿ ರೂ. ಯೋಜನೆ.

*ರೈಲು ಸುರಕ್ಷತೆಗೆ 1 ಲಕ್ಷ ಕೋಟಿ ರೂ. 

*2020 ರ  ಒಳಗೆ ಮಾನವರಹಿತ  ರೈಲ್ವೆ ಕ್ರಾಸಿಂಗ್

*ಇ- ಟಿಕೆಟ್ ಮೇಲೆ ಸರ್ವಿಸ್ ಜಾರ್ಜ್ ಇಲ್ಲ.

*2019ರ ಒಳಗಾಗಿ ಎಲ್ಲ ರೈಲುಗಳಲ್ಲಿ ಜೈವಿಕ ಟಾಯ್ಲೆಟ್ ಅಳವಡಿಕೆ

* 4 ಪ್ರಮುಖ ಉದ್ದೇಶದೊಂದಿಗೆ ರೈಲ್ವೆ ಕ್ಷೇತ್ರ  ಅಭಿವೃದ್ಧಿ 

*500 ಕಿ.ಲೋ ಮೀಟರ್ ಹೊಸ ರೈಲ್ವೆ ಹಳಿ ಅಳವಡಿಕೆ

*ಸಣ್ಣ ನಗರಗಳಲ್ಲೂ  ವಿಮಾನ ನಿಲ್ದಾಣ. ವಿಮಾನ  ನಿಲ್ದಾಣ ಪ್ರಾಧಿಕಾರದ  ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಕೆ 

*ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ 2.41 ಲಕ್ಷ ಕೋಟಿ ರೂ.

* 3,500 ಕಿ.ಮಿ. ಹೊಸ ರೈಲು ಮಾರ್ಗ ನಿರ್ಮಾಣ.

*ರೈಲು ನಿಲ್ದಾಣಗಳಲ್ಲಿ ದಿವ್ಯಾಂಗರ  ಅನುಕೂಕ್ಕೆ ಯೋಜನೆ

*ಡಿಜಿಟಲ್ ವ್ಯವಹಾರ ಹೆಚ್ಚಿಸಲು ಭೀಮ್ ಸ್ಕೀಮ್ ಎರಡು ಹೋಜನೆ.

* ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲವರಿಗೆ ಆಧಾರ ಕಾರ್ಡ್ ಮೂಲಕ ವ್ಯವಹಾರಕ್ಕೆ ಕ್ರಮ 

* ಪ್ರಧಾನ  ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ಸೌಲಭ್ಯ 

*ಆಧಾರ್ ಕಾರ್ಡ್ ಆಧಾರದಲ್ಲಿ ಹೊಸ ಸ್ಮಾರ್ಟ್ ಕಾರ್ಡ್

*ಆನ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ

*ಆಧಾರ್ ಆಧಾರಿತ ಯೋಜನೆಗೆ 20 ಲಕ್ಷ ಹೊಸ ಕೇಂದ್ರ,  ಆಧಾರ ಪೇ ಹೆಸರಿನಲ್ಲಿ ಯೋಜನೆ ಜಾರಿ.

*ಆರ್ಥಿಕ ಸುಸ್ತಿದಾರರ  ಆಸ್ತಿ ವಶಪಡಿಸಿಕೊಳ್ಲಲು ಕ್ರಮ.

* 2020ರ  ಒಳಗೆ ಆಧಾರ್ ಆಧಾರಿತ 20 ಲಕ್ಷ ಸ್ವೈಪ್  ಮಿಶನ್ 

*ರಕ್ಷಣಾ ಇಲಾಖೆಗೆ 2.74 ಲಕ್ಷ  ಕೋಟಿ ರೂ.  ಅನುದಾನ

*2016 &17 ನೆ ಸಾಲಿನ  ಆದಾಯ ತೆರಿಗೆ ಘೋಷಣೆ ವಿವರ : 50 ಲಕ್ಷ ರೂ ಕಡಿಮೆ ಆದಾಯ -1.72 ಲಕ್ಷ ಜನರು ಘೋಷಣೆ,  10 ಲಕ್ಷ ಕಡಿಮೆ ಆದಾಯ 24 ಲಕ್ಷ ಜನ, 2.50 ಲಕ್ಷ ರೂ. ಕಡಿಮೆ ಆದಾಯ 99 ಲಕ್ಷ ಜನರಿಂದ ಘೋಷಣೆ, ಒಟ್ಟು 3.5 ಕೋಟಿ ಜನರಿಂದ  ಆದಾಯ ತೆರಿಗೆ ಪಾವತಿ.

*ದೇಶದಲ್ಲಿ 13.97 ಲಕ್ಷ ನೋಂದಾಯಿತ  ಕಂಪನಿಗಳ ಪೈಕಿ 5.97 ಕಂಪೆನಿಗಳಿಂದ  ತೆರಿಗೆ  ಹಣ ಪಾವತಿ. 

*3 ಲಕ್ಷ ರೂಪಾಯಿಗಳಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ

*ವಾರ್ಷಿಕ 50 ಕೋಟಿ ವ್ಯವಹಾರ ಮಾಡುವ ಕಂಪೆನಿಗೆ  ಶೇ 5ರಷ್ಠು ತೆರಿಗೆ ವಿನಾಯತಿ 

* ರಾಜಕೀಯ ಪಕ್ಷಗಳಿಗೆ 2 ಸಾವಿರ ರೂ. ಮಾತ್ರ ನಗದಿನಲ್ಲಿ ಪಾವತಿ 

* ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಷರತ್ತು. ಚೆಕ್, ಡಿಡಿ, ಡಿಜಿಟಲ್ ಮೋಡ್ ನಲ್ಲಿ ಹಣ ಪಡೆಯಲು ಅವಕಾಶ.

 *ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ.

* ಆದಾಯ ತೆರಿಗೆ ಶೇ 10ರಿಂದ 5ಕ್ಕೆ ಕಡಿತ 

*  ವಾರ್ಷಿಕ  ಆದಾಯ 3 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ

* 3ರಿಂದ 5 ಲಕ್ಷ ರೂ. ಆದಾಯಕ್ಕೆ ಶೇ 5ರಷ್ಟು ತೆರಿಗೆ 

*5ರಿಂದ 10 ಲಕ್ಷ ರೂ. ಆದಾಯಕ್ಕೆ ಶೇ 10ರಷ್ಟು 

*10ರಿಂದ ಮೇಲ್ಪಟ್ಟು ಶೇ 30

* ರೂ. 50 ಲಕ್ಷಕ್ಕಿಂತ ಹೆಚ್ಚು   ಆದಾಯ ಇರುವವರಿಗೆ ಶೇ 10ರಷ್ಟು ಸರ್ಚಾರ್ಜ್ 

*1 ಕೋಟಿ ರೂ.ಗಿಂತ ಹೆಚ್ಚು ಆದಾಯ  ಇರುವವರಿಗೆ ಶೇ 15ರಷ್ಟು ಸರ್ಚಾರ್ಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News