×
Ad

ದೈವಾನುಭೂತಿಯ ದಿವ್ಯಾನುಭವದ ಬಗ್ಗೆ ಇತರರಿಗೆ ವಿವರಿಸಿ : ಕಾರ್ಡಿನಲ್ ಟೊಪ್ಪೊ

Update: 2017-02-04 13:30 IST

ಭೋಪಾಲ್, ಫೆ.4: ದೇವರನ್ನು ದೈನಂದಿನ ಜೀವನದ ಚಟುವಟಿಕೆಗಳಲ್ಲಿ ಕಾಣಬೇಕು ಹಾಗೂ ಈ ದೈವಾನುಭೂತಿಯ ದಿವ್ಯಾನುಭವವನ್ನು ಇತರರೊಂದಿಗೆ ಹಂಚಬೇಕು ಎಂದು ರಾಂಚಿಯ ಆರ್ಚ್ ಬಿಷಪ್ ಅತಿ ವಂ. ಟೆಲೆಸ್ಫೋರ್ ಕಾರ್ಡಿನಲ್ ಟೊಪ್ಪೊ ಇಲ್ಲಿ ಶುಕ್ರವಾರ ನಡೆದ ಕಾನ್ಫರೆನ್ಸ್ ಆಫ್ ಕೆಥೊಲಿಕ್ ಬಿಷಪ್ಸ್ ಆಫ್ ಇಂಡಿಯಾ (ಸಿಸಿಬಿಐ) ಇದರ 29ನೆ ಮಹಾ ಅಧಿವೇಶನದ (ಪ್ಲಿನರಿ ಅಸೆಂಬ್ಲಿ) ಮೂರನೆ ದಿನದಂದು ನಡೆದ ಪವಿತ್ರ ಯುಖರಿಸ್ಟ್ ಸಂದರ್ಭ ಹೇಳಿದರು.

ಆರ್ಚ್ ಬಿಷಪ್ ಲಿಯೊ ಕೊರ್ನೆಲಿಯೊ ತಮ್ಮ ಭಾಷಣದಲ್ಲಿ, ‘‘ಮಧ್ಯ ಪ್ರದೇಶದ ರಾಜಕೀಯ ಶಕ್ತಿ ಕೇಂದ್ರವಾದ ಭೋಪಾಲದಲ್ಲಿನ ಚರ್ಚ್‌ ರಾಜ್ಯದ ರಾಜಕೀಯ ನೇತಾರರು ಹಾಗೂ ಸರಕಾರಿ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ’’ ಎಂದರು.

ನಗರದಲ್ಲಿ ವಿವಿಧ ಧರ್ಮಗಳ ನಡುವೆ ಇರುವ ಸಹಕಾರ ಹಾಗೂ ಏಕತೆ ಹಾಗೂ ಆರೋಗ್ಯಕರ ಸಂಬಂಧಗಳನ್ನು ಅವರು ಪ್ರಶಂಸಿಸಿದರು. ‘‘ನಗರದ ಶಾಂತಿಯುತ ವಾತಾವರಣವನ್ನೂ ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕಾಗುತ್ತದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜಧಾನಿ ನಗರವಾದ ಭೋಪಾಲ್ ಕೂಡ ಚರ್ಚಿನ ಬೆಳವಣಿಗೆಗೆ ಕಾರಣವಾಗಿದೆ’’ ಎಂದು ಅವರು ತಿಳಿಸಿದರು.
‘‘ಕ್ರೈಸ್ತರನ್ನು ಆಹ್ವಾನಿಸಿ ಕ್ರಿಸ್ಮಸ್ ಆಚರಿಸುವ ಪದ್ಧತಿಯನ್ನು ಕಳೆದ ಐದು ವರ್ಷಗಳಿಂದ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಅನುಸರಿಸುತ್ತಿದ್ದಾರೆ’’ ಎಂದು ಆರ್ಚ್ ಬಿಷಪ್ ಲಿಯೊ ಕೊರ್ನೆಲಿಯೊ ಹೇಳಿದರು.

ಸಿಸಿಬಿಐನ ದ್ವೈವಾರ್ಷಿಕ ವರದಿ ಹಾಗೂ ಅದರ ವಿವಿಧ ಸಮಿತಿಗಳು ಭವಿಷ್ಯದ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಲು ಈ ದಿನವನ್ನು ವಿಶೇಷವಾಗಿ ನಿಗದಿಪಡಿಸಲಾಗಿತ್ತು. ‘ದೇವರ ಮಾತುಗಳಿಂದ ಸ್ಫೂರ್ತಿ ಪಡೆದ ಜನರು ದೇವರ ಇಚ್ಛೆಯಂತೆಯೇ ನಡೆಯುತ್ತಾರೆಂದು ಹೇಳಿದ ಬೈಬಲ್ ಕಮಿಷನ್, ‘‘ದೇವರ ಮಾತು ಸಂತಸದ ಕೌಟುಂಬಿಕ ಜೀವನದ ಮೂಲ’’ ಎಂಬುದನ್ನು ಒತ್ತಿ ಹೇಳಿತು.

‘‘ಪ್ರೀತಿ, ಸತ್ಯ, ನ್ಯಾಯ, ಶಾಂತಿ, ಸೌಹಾರ್ದ ಹಾಗೂ ಸಹಬಾಳ್ವೆ ಇವುಗಳನ್ನು ಉತ್ತೇಜಿಸಿ ದೇವರ ಸಾಮ್ರಾಜ್ಯವನ್ನು ಸ್ಥಾಪಿಸುವುದು’’ ಕಮಿಷನ್ ಆಫ್ ಕ್ಯಾನನ್ ಲಾ ಇದರ ಉದ್ದೇಶವಾಗಿತ್ತು. ಪ್ರಾರ್ಥನೆ, ಸಾಮರಸ್ಯ, ಮಾತುಕತೆ ಹಾಗೂ ಸಮಾನ ಕ್ರಮಗಳ ಮೂಲಕ ಸಹಬಾಳ್ವೆಯ ವಾತಾವರಣ ಮೂಡಿಸಲು ಕಮಿಷನ್ ಫಾರ್ ಯುಕಮೆನಿಸಂ ಪ್ರೀತಿಯಿಂದ ಹಾಗೂ ತೆರೆದ ಮನಸ್ಸಿನ ಭಾವನೆಯಿಂದ ಮಾಡಿದೆ. ಏಸುವನ್ನು ಜೀವನದ ಭಾಗವಾಗಿಸಿ ಸ್ವೀಕರಿಸಲು, ತಮ್ಮ ಧರ್ಮವನ್ನು ಅರಿತು, ವಿಶ್ವವನ್ನು ಜಾತ್ಯತೀತಗೊಳಿಸಲು ಏಸುವಿನ ಮೌಲ್ಯಗಳನ್ನು ಯುವಕರು ಪಸರಿಸುವ ನಿಟ್ಟಿನಲ್ಲಿ ಮೂರು ಪಟ್ಟು ಹೆಚ್ಚು ಮಹತ್ವವನ್ನು ನೀಡಲು ಕಮಿಷನ್ ಫಾರ್ ಯುತ್ ಪ್ರಯತ್ನಿಸುತ್ತಿದೆ .ಕಮಿಷನ್ ಫಾರ್ ಲಿಟರ್ಜಿ ಇಹಲೋಕ ತ್ಯಜಿಸಿದವರಿಗೆ ಲ್ಯಾಟಿನ್ ರೈಟ್ ಅನ್ವಯ ಹಾಗೂ ಉತ್ತರ ಭಾರತೀಯ ಪದ್ಧತಿಯನುಸಾರ ಹೊಸ ಆಫೀಸ್ ಬುಕ್ ತೆರೆದಿದೆ.

ಕ್ಯಾಟೆಕೆಟಿಕ್ಸ್, ಲೇಟಿ, ಪ್ರೊಕ್ಲೆಮೇಶನ್, ಥಿಯಾಲಜಿ ಹಾಗೂ ಡಾಕ್ಟ್ರಿನ್ ಇವುಗಳ ಕಮಿಷನ್ ಗಳುತಮ್ಮ ಭವಿಷ್ಯದ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನಗಳ ಬಗ್ಗೆ ವರದಿಗಳನ್ನು ನೀಡಿದವು.

ಈ ಎಲ್ಲ ಕಮಿಷನ್ ಗಳ ವರದಿಗಳ ಆಧಾರದಲ್ಲಿ ಹೊಸ ನೀತಿಯೊಂದನ್ನು ರಚಿಸುವ ನಿಟ್ಟಿನಲ್ಲಿ ಕಾರ್ಯಾಗಾರವೊಂದನ್ನೂ ಹಮ್ಮಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News