ರಜನಿಕಾಂತ್ ಗೆ ಬಿಜೆಪಿ ಗಾಳ

Update: 2017-02-10 12:11 GMT

ಚೆನ್ನೈ, ಫೆ.10: ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಪಕ್ಷ ಇಬ್ಬಾಗವಾಗುವ ಹಾದಿಯಲ್ಲಿದೆ.  ವಿವಿಧ ಪಕ್ಷಗಳು ಈ ಬೆಳವಣಿಗೆಯನ್ನು  ಮೌನವಾಗಿ ಗಮನಿಸುತ್ತಿದ್ದರೆ, ಬಿಜೆಪಿಯು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಗೆ  ಗಾಳ ಹಾಕಿದೆ. 
ರಜನಿಕಾಂತ್ ಮೂಲಕ ತಮಿಳುನಾಡಿನಲ್ಲಿ ರಾಜಕೀಯದ ಹೊಸ ಅಲೆ ಎಬ್ಬಿಸುವುದು ಬಿಜೆಪಿಯ ಉದ್ದೇಶವಾಗಿದೆ.
ರಜನಿಕಾಂತ್ ಅವರನ್ನು ರಾಜಕೀಯಕ್ಕೆ ಕರೆ ತರಲು ಬಿಜೆಪಿ ನಾಯಕರು ಯತ್ನ ನಡೆಸಿದ್ದಾರೆ. ಆದ್ರೆ ಅವರು ತನ್ನ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ. ಈ ನಡುವೆ ಬಿಗ್ ಬಿ ಅಮಿತಾಭ್ ಬಚ್ಚನ್‌ ಅವರು ರಜನಿಕಾಂತ್ ಗೆ ರಾಜಕೀಯ ಸೇರದಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ರಜನಿಕಾಂತ್ ಗೆ ಅಮಿತಾಭ್ ಬಚ್ಚನ್ ಅವರು ರಾಜಕೀಯ ಸೇರದಂತೆ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ. ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನು ಹೇಳಿಲ್ಲ. ಬಿಜೆಪಿ ನಾಯಕರು ಹಿಂದೆಯೂ ಅವರನ್ನು ರಾಜಕೀಯಕ್ಕೆ ಕರೆ ತರಲು ವಿಫಲ ಯತ್ನ ನಡೆಸಿದ್ದರು. ಈಗ ಮತ್ತೊಮ್ಮೆ ಮನವೊಲಿಸುವ  ಪ್ರಯತ್ನ ಮುಂದುವರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News