"ಸ್ವಂತ ತಾಯಿ, ಸಹೋದರಿಯರಿಗೆ ಈ ಗತಿ ಬಂದರೇ?": ವಕೀಲರನ್ನು ಪ್ರಶ್ನಿಸಿದ ಖ್ಯಾತ ನಿರ್ದೇಶಕ ವಿನಯನ್

Update: 2017-02-24 07:02 GMT

ತಿರುವನಂತಪುರಂ, ಫೆ. 24: ಪಲ್ಸರ್ ಸುನಿಯನ್ನು ಬಂಧಿಸಿ ಪೊಲೀಸರು ನಂಬಿಕೆ ಉಳಿಸಿಕೊಂಡಿದ್ದಾರೆಂದು ಮಲಯಾಳಂನ ಖ್ಯಾತ ನಿರ್ದೇಶಕ ವಿನಯನ್ ಹೇಳಿದ್ದಾರೆ. ಹೇಗೆ ನೋಡಿದರೂ ಇದಕ್ಕೊಂದು ಮಾನವೀಯ ಮುಖ ವಿದೆ. ಸ್ವಂತ ಅಮ್ಮನಿಗೋ ಸಹೋದರಿಗೋ ಈಗತಿ ಬಂದರೆ ವಕೀಲರು ಹೀಗೇ ಪ್ರತಿಕ್ರಿಯಿಸುತ್ತಿದ್ದರೇ ಎಂದು ಅವರು ಪ್ರಶ್ನಿಸಿದ್ದಾರೆ.

ಹೆಲ್ಮೆಟ್ ಇಲ್ಲದೆ ರಸ್ತೆಯಲ್ಲಿ ಬರುವ ಪಲ್ಸರ್ ಸುನಿಯ ಗುರುತು ಸಿಕ್ಕರೆ ಆತನ ಗತಿಯೇನಾದೀತು. ಇಂತಹ ಒಬ್ಬ ಆರೋಪಿಯನ್ನು ಬೆಂಬಲಿಸಿ ಮಾತಾಡುವ ವಕೀಲರು ಮಾನವಹಕ್ಕುಗಳೊಂದಿಗೆ ಭಾರೀ ತಪ್ಪೆಸಗುತ್ತಿದ್ದಾರೆ. ರಾಜಕೀಯದ ಕುರಿತು ತಾನು ಮಾತಾಡುವುದಿಲ್ಲ. ಮೊದಲ ದಿವಸ ಪೊಲೀಸರಿಂದ ಸಣ್ಣದೊಂದು ತಪ್ಪು ಆಗಿತ್ತು. ಸುನಿಯನ್ನು ಸರಿಯಾಗಿ ಪ್ರಶ್ನಿಸಬೇಕು. ಸಿನೆಮಾ ತಾರೆಗಳಲ್ಲಿ ಯಾರಾದರೂ ಈತನನ್ನು ಸಂಪರ್ಕಿಸಿದ್ದಾರೆಯೇ ಎಂದು ತಿಳಿಯಬೇಕು. ಆರು ದಿವಸ ಅವನಿಗೆ ರಕ್ಷಣೆ ನೀಡಿದ್ದು ಯಾರು? ಇದರ ಹಿಂದೆ ಸಂಚು ಇದೆಯೇ ಎಂಬೆಲ್ಲಾ ಪ್ರಶ್ನಿಸಿ ತಿಳಿಯಬೇಕು. 24 ಗಂಟೆಯೊಳಗೆ ಇದನ್ನೆಲ್ಲ ಪ್ರಶ್ನಿಸಿ ತಿಳಿಯಬೇಕಿದೆ ಎಂದು ವಿನಯನ್ ಹೇಳಿದರು.

ಒಂದು ಬ್ಲಾಕ್‌ಮೇಲ್‌ಗಾಗಿ ಈ ಕೆಲಸಮಾಡಿದ್ದಾನೆಂದು ನಂಬಲು ಸಾಧ್ಯವಿಲ್ಲ. ಯಾವುದೋ ಸಂಚು ಇದರ ಹಿಂದಿದೆ. ಆ ಸಂಚಿನ ಹಿಂದಿರುವುದುಯಾರೆಂದು ಬಹಿರಂಗವಾಗಬೇಕಿದೆ ಎಂದು ವಿನಯನ್ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News