ಸೇತುವೆಯಿಂದ ಕಾಲುವೆಗೆ ಉರುಳಿದ ಬಸ್; 11ಸಾವು
Update: 2017-02-28 11:47 IST
ವಿಜಯವಾಡ, ಫೆ.28: ಬಸ್ಸೊಂದು ಸೇತುವೆಯಿಂದ ಕಾಲುವೆಗೆ ಉರುಳಿ ಬಿದ್ದ ಪರಿಣಾಮವಾಗಿ ಹನ್ನೊಂದು ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಲ್ಲುಪಾಡು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಭುವನೇಶ್ವರದಿಂದ ಹೈದಾರಾಬಾದ್ ತೆರಳುತ್ತಿದ್ದ ಬಸ್ ಖಾಸಗಿ ಬೆಳಗ್ಗೆ 5.30 ರ ಸುಮಾರಿಗೆ ಸೇತುವೆಯ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಭುವನೇಶ್ವರದಿಂದ ತೆಲಂಗಾಣ ರಾಜ್ಯಕ್ಕೆ ಬಂದ ಈ ಖಾಸಗಿ ಬಸ್ ವಿಜಯವಾಡ ಬಳಿ ನಿಂತಿತ್ತು, ಬಳಿಕ ಚಾಲಕನನ್ನು ಬದಲಿಸಿಕೊಂಡು ಹೊಸ ಚಾಲಕನೊಂದಿಗೆ ಪುನಃ ಪ್ರಯಾಣ ಮಾಡುತ್ತಿದ್ದಾಗ ಚಾಲಕ ನಿದ್ರೆಗೆ ಜಾರಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗಾಯಾಳುಗಳನ್ನು ಸ್ಥಳೀಯ ನಂದಿಗಾಮ ಮತ್ತು ವಿಜಯವಾಡ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ .