ಕಣ್ಣೂರು:ಸ್ಥಳೀಯ ಬಿಜೆಪಿ ನಾಯಕನ ಮೇಲೆ ದಾಳಿ

Update: 2017-03-09 09:19 GMT

ಕಣ್ಣೂರು,ಮಾ.9: ಬಿಜೆಪಿಯ ಕಣ್ಣೂರು ಮಂಡಲ ಉಪಾಧ್ಯಕ್ಷ ಸುಶೀಲ ಕುಮಾರ್(48) ಅವರ ಮೇಲೆ ಒಂಭತ್ತು ಜನರ ಗುಂಪೊಂದು ದಾಳಿ ನಡೆಸಿದೆ ಎಂದು ಪೊಲೀಸರು ಗುರುವಾರ ಇಲ್ಲಿ ತಿಳಿಸಿದರು.

 ಬುಧವಾರ ರಾತ್ರಿ ಜಿಲ್ಲೆಯ ತಲಾಪ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಮೂರು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಸುಶೀಲ ಕುಮಾರ್ ಅವರನ್ನು ಚೂರಿಗಳಿಂದ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದರು.
ಸುಶೀಲ ಕುಮಾರ್ ಮೇಲಿನ ದಾಳಿಯಲ್ಲಿ ಸಿಪಿಎಂ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News