ತಮಿಳ್ನಾಡು: ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಇಬ್ಬರ ಸಾವು

Update: 2017-04-17 08:59 GMT

ಚೆನ್ನೈ, ಎ. 17: ತಮಿಳ್ನಾಡಿನ ಶಿವಗಂಗಾ ಜಿಲ್ಲೆಯಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯ ವೇಳೆ ಇಬ್ಬರು ಮೃತಪಟ್ಟಿದ್ದಾರೆ. ಓರ್ವರು ಗೂಳಿಯ ತಿವಿತಕ್ಕೊಳಗಾಗಿ ಮೃತಪಟ್ಟಿದ್ದರೆ ಇನ್ನೊಬ್ಬರು ಹೃದಯಾಘಾತಕ್ಕೀಡಾಗಿ ನಿಧನಹೊಂದಿದ್ದಾರೆ.

ಜಲ್ಲಿಕಟ್ಟನ್ನು ನೋಡುತ್ತಿದ್ದ 32ವರ್ಷ ವಯಸ್ಸಿನ ಯುವಕ ಗೂಳಿಯ ತಿವಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ತಿರುವಾವಕ್ಕರು ಎಂಬಲ್ಲಿನ ಇಂಜಿನಿಯರ್ ಪಧವೀಧರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬ್ಯಾರಿಕೇಡ್‌ನೆಡೆಗೆ ಗೂಳಿ ಅನಿರೀಕ್ಷಿತವಾಗಿ ಓಡಿ ಬರುತ್ತಿರುವುದನ್ನು ನೋಡಿದ ಇನ್ನೊಬ್ಬ ವ್ಯಕ್ತಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದ 80 ಮಂದಿ ಗಾಯಗೊಂಡಿದ್ದಾರೆ.

ಸ್ಪರ್ಧೆಯು ಮುಗಿದ ಬಳಿಕ ವಿಜೇತರನ್ನು ತಪ್ಪಾಗಿ ಘೋಷಿಸಲಾಗಿದೆ ಎಂದು ಎರಡು ಗುಂಪುಗಳೊಳಗೆ ಜಗಳ ನಡೆದಿದೆ. ಇದರಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ. ಸ್ಪರ್ಧೆಯಲ್ಲಿ ಬಹುಮಾನವಾಗಿಟ್ಟಿದ್ದ ಮೋಟಾರು ಬೈಕ್ ಗಲಾಟೆಯಲ್ಲಿ ಹಾನಿಗೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News