ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಪಿಡಿಪಿ ನಾಯಕ ಬಲಿ

Update: 2017-04-24 09:27 GMT

ಶ್ರೀನಗರ, ಎ.24: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾನಲ್ಲಿ ಉಗ್ರರು  ನಡೆಸಿದ ಗುಂಡಿನ ದಾಳಿಗೆ ಪಿಡಿಪಿಯ ಜಿಲ್ಲಾ ನಾಯಕ ಅಧ್ಯಕ್ಷ ಅಬ್ದುಲ್‌ ಘನಿ ದಾರ್‌ ಎಂಬವರು  ಬಲಿಯಾಗಿದ್ದಾರೆ.
 ಅಬ್ದುಲ್‌ ಘನಿ ಅವರು ಇಂದು ಬೆಳಗ್ಗೆ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದಾಗ  ಪಿಂಗ್ಲಾನ ಎಂಬಲ್ಲಿ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಗನಿ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮುಖ್ಯ ಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿ ಕಾಶ್ಮೀರದ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ ಬೆನ್ನಲ್ಲೆ ಆಡಳಿತಾರೂಢ ಪಿಡಿಪಿಯ ಜಿಲ್ಲಾ ನಾಯಕನ ಮೇಲೆ ಉಗ್ರರದಾಳಿ ನಡೆದಿದೆ.
ಕಾಶ್ಮೀರದಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಯ ನಡುವೆ ಸಂಘರ್ಷ ಮತ್ತೆ ಕಾಣಿಸಿಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News