ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಹೇರಬೇಕು: ಸುಬ್ರಮಣಿಯನ್ ಸ್ವಾಮಿ

Update: 2017-04-25 09:14 GMT

ಹೊಸದಿಲ್ಲಿ,ಎ. 25: ಕಾಶ್ಮೀರದಲ್ಲಿ ತುರ್ತುಪರಿಸ್ಥಿತಿ ಘೋಷಿಸಬೇಕು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಕಾಶ್ಮೀರದಲ್ಲಿ ಈಗ ಜಿಹಾದಿಗಳ ದಾಳಿ ಹೆಚ್ಚಳವಾಗಿದೆ.ಕೇಂದ್ರ ಸರಕಾರ ಅಲ್ಲಿ 352 ಕಲಂ ಪ್ರಕಾರ ಕೂಡಲೇ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಟ್ವಿಟರ್ ಮೂಲಕ ಈ ಬೇಡಿಕೆಯನ್ನು ಮಂಡಿಸಿದ ಸ್ವಾಮಿ , ತುರ್ತುಪರಿಸ್ಥಿತಿ ಘೋಷಿಸಿ ಗುಂಡುಹಾರಿಸಬೇಕೆಂದು ಕೂಡಾ ಕೇಂದ್ರಸರಕಾರಕ್ಕೆ ಸಲಹೆ ನೀಡಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನತೆಯ ವಾತಾವರಣ ಮುಂದುವರಿದಿದೆ. ನಿನ್ನೆ ಭಯೋತ್ಪಾದಕರು ಪಿಡಿಪಿನಾಯಕರೊಬ್ಬರನ್ನುಹತ್ಯೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮಿ ಉಗ್ರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News