ರಾಜಕೀಯ ಕೊಲೆಗಳನ್ನು ಸಮರ್ಥಿಸುವುದಿಲ್ಲ: ಪಿಣರಾಯಿ

Update: 2017-05-15 06:12 GMT

ತಿರುವನಂತಪುರಂ,ಮೇ 15: ರಾಜಕೀಯ ಕೊಲೆ ಪಾತಕಗಳನ್ನು ಯಾರೂ ಸಮರ್ಥಿಸುವುದಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಂತಹ ಕೊಲೆಕೃತ್ಯಗಳನ್ನು ತಡೆಯುವ ಹೊಣೆ ಎಲ್ಲ ರಾಜಕೀಯ ಪಕ್ಷಗಳಿಗಿವೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನುರಾಜ್ಯ ಸರಕಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

    ಪಯ್ಯನ್ನೂರಿನ ಆರೆಸ್ಸೆಸ್ ಕಾರ್ಯಕರ್ತನ ಕೊಲೆ ಇಂತಹ ಒಂದು ಘಟನೆ ಎನ್ನಬಹುದು. ಸಿಪಿಎಂ ಕಾರ್ಯಕರ್ತರು ಕೊಲೆಕೃತ್ಯದ ಹಿಂದಿದ್ದಾರೆಂದುಪೊಲೀಸರಿಗೆ ಸಾಕ್ಷ್ಯ ಸಿಕ್ಕಿದೆ. ಕೊಲೆಯಾದ ಬಿಜುವಿನ ಜೊತೆಗಿದ್ದವರು ಹೀಗೆ ಸಾಕ್ಷಿ ಹೇಳಿದ್ದಾರೆ.ಕೊಲೆಕೃತ್ಯವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಪಯ್ಯನ್ನೂರ್ ಸಿಪಿಎಂ ವಲಯ ಸಮಿತಿ ಕೊಲೆಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು. ಬಿಜೆಪಿ ನಾಯಕರು ರಾಜ್ಯಪಾಲರಿಗೆ ನೀಡಿದ ಮನವಿಯನ್ನು ಅವರು ನನಗೆ ಹಸ್ತಾಂತರಿಸಿದ್ದಾರೆ. ರಾಜ್ಯಪಾಲರು ಸಾಂವಿಧಾನಿಕ ಹೊಣೆಗಾರಿಕೆಯನ್ನುನಿರ್ವಹಿಸಿದ್ದಾರೆ. ಬಿಜೆಪಿ ರಾಜ್ಯಪಾಲರನ್ನು ಬೆದರಿಸುತ್ತಿದೆ. ಇದು ಸಮ್ಮತಾರ್ಹವಲ್ಲ ಎಂದು ಪಿಣರಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News