ಬಳ್ಳಾರಿಗೆ 6 ಲಕ್ಷ ರೂ. ದಾನ ನೀಡಿದ ರಾಜಮೌಳಿ: ಕಾರಣವೇನು ಗೊತ್ತೇ?

Update: 2017-05-17 12:16 GMT

ಬಳ್ಳಾರಿ, ಮೇ 17: ಬಾಹುಬಲಿ 2 ಚಿತ್ರದ ಭರ್ಜರಿ ಯಶಸ್ಸಿನ ನಂತರ ಕನ್ನಡದಲ್ಲೂ ಡಬ್ಬಿಂಗ್ ಗೆ ಅನುವು ಮಾಡಿಕೊಡಬೇಕು ಎಂದು ಆಶಿಸಿದ್ದ ನಿರ್ದೇಶಕ ಎಸ್.ಎಸ್. ರಾಜಮೌಳಿ ಕರ್ನಾಟಕಕ್ಕೆ 6 ಲಕ್ಷ ರೂ. ನೀಡಿದ್ದಾರೆ.

ಬಳ್ಳಾರಿಯಲ್ಲಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಳ್ಳಲು ಈ ಮೊತ್ತ ನೀಡಿರುವ ರಾಜಮೌಳಿ 6 ಲಕ್ಷ ಮೊತ್ತದ ಚೆಕ್ಕನ್ನು ಬಳ್ಳಾರಿ ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಮೌಳಿ ಕರ್ನಾಟಕದ ರಾಯಚೂರಿನಲ್ಲಿ ಜನಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News