ಕನ್ನಡಿಗರಿಗೆ ತಮ್ಮ ಭಾಷೆಯ ಬಗ್ಗೆ ಅಭಿಮಾನವಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ಯಾಕೆ ಗೊತ್ತೇ?

Update: 2017-05-19 05:29 GMT

ಬೆಂಗಳೂರು, ಮೇ 19: ಸದಾ ವಿವಾದಾತ್ಮಕ ಟ್ವೀಟ್ ಗಳ ಮೂಲಕ ಸುದ್ದಿಯಾಗುತ್ತಿರುವ ಬಹುಭಾಷಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಕನ್ನಡಿಗರ ಬಗ್ಗೆ ಹೊಸ ಬಾಂಬೊಂದನ್ನು ಸಿಡಿಸಿದ್ದಾರೆ.

ತಮ್ಮ ಮಾತೃಭಾಷೆ ಕನ್ನಡದ ಬಗ್ಗೆ ಕನ್ನಡಿಗರಿಗೆ ಹೆಮ್ಮೆಯಿಲ್ಲ ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ. ಹಲವು ಬಾರಿ ತೆಲುಗು ಚಿತ್ರ ಬಾಹುಬಲಿಯನ್ನು ವೀಕ್ಷಿಸಿರುವ ಕನ್ನಡಿಗರು ಬೇರೆ ಕನ್ನಡ ಚಿತ್ರವೊಂದಕ್ಕಿಂತ ಬಾಹುಬಲಿಯನ್ನು ಕರ್ನಾಟಕದಲ್ಲಿ ಹಿಟ್ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ ಆರ್ ಜಿವಿ.

ಕನ್ನಡ ಚಿತ್ರಕ್ಕಿಂತ ಹೆಚ್ಚಾಗಿ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಿಗರು ವೀಕ್ಷಿಸಿದರೆ ಹೆಮ್ಮೆಯ ಕನ್ನಡಿಗರು ಅದನ್ನು ವಿರೋಧಿಸಬೇಕು ಎಂದವರು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News