ಗೋಹತ್ಯೆ ನಿಷೇಧ ಪ್ರತಿಭಟಿಸಿ ಎಡಪಕ್ಷಗಳಿಂದ ಬೀಫ್ ಫೆಸ್ಟ್‌

Update: 2017-05-27 05:34 GMT

ತಿರುವನಂತಪುರಂ,ಮೇ 27: ಹತ್ಯೆಗಾಗಿ ಗೋಮಾರಾಟವನ್ನು ನಿಷೇಧಿಸುವ ಕೇಂದ್ರಸರಕಾದ ಅಧಿಸೂಚನೆ ವಿರೋಧಿಸಿ ಕೇರಳದಲ್ಲಿ ಎಡಪಕ್ಷ ಸಂಘಟನೆಗಳಾದ ಎಸ್ಸೆಫ್‌ಐ ಮತ್ತು ಡಿವೈಎಫ್‌ಐ ರಾಜ್ಯಾದ್ಯಂತ ಬೀಫ್ ಫೆಸ್ಟ್ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ರಾಜ್ಯದ ಎಲ್ಲ ವಲಯ ಕೇಂದ್ರಗಳಲ್ಲಿ ಬೀಫ್ ಫೆಸ್ಟ್ ಸಂಘಟಿಸಲು ಈಗಾಗಲೇ ಇವೆರಡು ಸಂಘಟನೆಗಳು ಕರೆ ನೀಡಿವೆ. ಈಗಾಗಲೇ ತಿರುವನಂತಪುರಂನಲ್ಲಿ ಬೆಳಗ್ಗೆಯೇ ಫೆಸ್ಟ್ ನಡೆಯುತ್ತಿದೆ. ಸಂಜೆ ಸೆಕ್ರಟರಿಯೇಟ್ ಪರಿಸರದಲ್ಲಿ ಬೀಫ್‌ಪೆಸ್ಟ್ ಆಯೋಜಿಸಲಾಗುತ್ತಿದೆ.

ಗೋಹತ್ಯೆ ನಿಷೇಧವನ್ನು ಕೇರಳ ಮುಖ್ಯಮಂತ್ರಿ ಸಹಿತ ಅನೇಕ ಗಣ್ಯರು ಈಗಾಗಲೇ ಟೀಕಿಸಿದ್ದಾರೆ. ಯುವಜನ ಸಂಘಟನೆಗಳು , ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈಹಿಂದೆ ಗೋ ಸಂರಕ್ಷಕರ ಅಕ್ರಮಗಳನ್ನು ಪ್ರತಿಭಟಿಸಿ ಕೇರಳದಲ್ಲಿ ಬೀಫ್‌ಪೆಸ್ಟ್ ಆಯೋಜಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News