ಕಲ್ಲಿದ್ದಲು ಗಣಿಕುಸಿತ: ಐವರು ಮೃತ್ಯು; 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
Update: 2017-05-27 16:09 GMT
ಜಾರ್ಖಂಡ್, ಮೇ 27: ಅಕ್ರಮವಾಗಿ ನಡೆಯುತ್ತಿದ್ದ ಕಲ್ಲಿದ್ದಲು ಗಣಿ ಕುಸಿದು ಐವರು ಮೃತಪಟ್ಟು 20ಕ್ಕೂ ಅಧಿಕ ಮಂದಿ ಗಂಭೀರ ಗಾಯಗೊಂಡ ಘಟನೆ ಗಿರ್ದಿ ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮುಹಮ್ಮದ್ ಕುರ್ಬಾನ್ (35), ಮುಹಮ್ಮದ್ ಶಮೀಮ್ (50), ಮುಹಮ್ಮದ್ ಜಾಹಿದ್ (23), ಮುಹಮ್ಮದ್ ಇನಾಮುಲ್ (23) ಹಾಗೂ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕೆಲವರು ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಅಮಾಯಕರನ್ನು ಬಲಿ ತೆಗೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂಧು ಪೊಲೀಸ್ ಅಧಿಕಾರಿ ಮನೀಶ್ ಟೊಪ್ಪೊ ಹೇಳಿದ್ದಾರೆ.