"ಪತ್ರಕರ್ತರಿಗೆ ಶೂನಲ್ಲಿ ಹೊಡೆಯಿರಿ": ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

Update: 2017-05-28 06:24 GMT

ಮುಂಬೈ, ಮೇ 28: ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ನೇತೃತ್ವದ ಸರಕಾರದ ಸಚಿವರೊಬ್ಬರು ಪತ್ರಕರ್ತರ ವಿರುದ್ಧ ನೀಡಿದ್ದ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಚಿವಾಲಯದಿಂದ ಅವರನನ್ನು ವಜಾ ಮಾಡುವಂತೆ ಆಗ್ರಹಗಳು ಕೇಳಿ ಬರುತ್ತಿವೆ,

ಹಿಂಗೋಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜ್ಯ ಸಾಮಾಜಿಕ ನ್ಯಾಯ ಸಚಿವ ದಿಲೀಪ್ ಕಾಂಬ್ಳೆ, ಪತ್ರಕರ್ತರು ಹಣಕ್ಕಾಗಿ ಏನನ್ನೂ ಬರೆಯುತ್ತಾರೆ, ಅವರಿಗೆ ಶೂನಲ್ಲಿ ಹೊಡೆಯಬೇಕು” ಎಂದಿದ್ದರು, ಸಚಿವರ ಈ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗಿತ್ತು.

“ಪತ್ರಕರ್ತರಿಗೆ ಶೂನಲ್ಲಿ ಹೊಡೆಯಬೇಕು ಎಂದು ಕಾಂಬ್ಳೆ ಹೇಳಿಕೆ ನೀಡಿದ್ದಾರೆ. ಅವರ ಪಕ್ಷ ಅದನ್ನೇ ಹೇಳಿಕೊಟ್ಟಿದೆ. ಸಚಿವಾಲಯದಿಂದ ಅವರನ್ನು ವಜಾಗೊಳಿಸಬೇಕು” ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಬ್ಳೆ, ಪತ್ರಿಕೋದ್ಯಮದ ಕೆಟ್ಟ ಬೆಳವಣಿಗೆಗಳ ಬಗ್ಗೆ ನಾನು  ಮಾತನಾಡಿದ್ದೇನೆ. ಪ್ರಾಮಾಣಿಕ ಪತ್ರಕರ್ತರ ಬಗ್ಗೆ ನಾನು ಮಾತನಾಡಿಲ್ಲ” ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News