ಪೂಂಛ್ ನಲ್ಲಿ ಮತ್ತೋರ್ವ ನುಸುಳುಕೋರನ ಹತ್ಯೆ

Update: 2017-05-28 08:44 GMT

 ಪೂಂಛ್‌‌ , ಮೇ 28:ಜಮ್ಮು-ಕಾಶ್ಮೀರದಲ್ಲಿ ಭಾರತ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದ ಪಾಕ್‌ನ ಮತ್ತೋರ್ವ ನುಸುಳುಕೋರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ. 
ಇಂದು ಬೆಳಗ್ಗೆ ನುಸುಳುಕೋರನನ್ನು ಸಿಖ್ ಬೆಟಾಲಿಯನ್ ಸಿಬ್ಬಂದಿಗಳು  ಹೊಡೆದುರುಳಿಸಿರುವ ಬಗ್ಗೆ  ಸೇನಾ ವಕ್ತಾರ ಲೆಪ್ಟಿನೆಂಟ್‌ ಕರ್ನಲ್‌ ಮನೀಶ್ ಮೆಹ್ತಾ   ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 10 ಉಗ್ರರನ್ನು ಭದ್ರತಾ ಸಿಬ್ಬಂದಿ ಸದೆಬಡಿದಿದೆ. ಇದರಲ್ಲಿ ಈ ಹಿಂದೆ ಭದ್ರತಾ ಪಡೆಗಳಿಂದಲೇ ಸಾವಿಗೀಡಾದ ಹಿಜ್ಬುಲ್‌ ಮುಜಾಹಿದ್ದೀನ್‌ ಕಮಾಂಡರ್ ಬುರ್ಹಾನ್ ವಾನಿ ಉತ್ತರಾಧಿಕಾರಿ, ಸ್ಥಳೀಯ ನಿವಾಸಿ ಸಬ್‌ಜರ್‌ ಅಹ್ಮದ್‌ ಬಟ್‌ ಹಾಗೂ ಫೈಜಾನ್‌ ಮುಜಾಫ್ಫರ್‌ ಸಹ ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News