ಬಿಹಾರದಲ್ಲಿ ಸಿಡಿಲಿನ ಆರ್ಭಟ: 20 ಮಂದಿ ಮೃತ್ಯು

Update: 2017-05-28 17:45 GMT

ಬಿಹಾರ, ಮೇ 28: ಭಾರೀ ಗಾಳಿಮಳೆಗೆ ಬಿಹಾರ ತತ್ತರಿಸಿದ್ದು, ವಿವಿಧ ಪ್ರಕರಣಗಳಲ್ಲಿ ಸುಮಾರು 20 ಮಂದಿ ಸಿಡಿಲಿನ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ಬಿಹಾರ ವಿಕೋಪ ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಯ್ಯ ಎಂಬಲ್ಲಿ ಆರು ಮಂದಿ, ಜಮೂಯಿ ಜಿಲ್ಲೆಯಲ್ಲಿ 5 ಮಂದಿ, ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹರಿ ಎಂಬಲ್ಲಿ ನಾಲ್ಕು ಮಂದಿ, ಭಗಲ್ಪುರದಲ್ಲಿ ಮೂವರು, ವೈಶಾಲಿ ಹಾಗೂ ಸಮಸ್ತಿಪುರ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಎಂದು ರಾಜ್ಯ ಸರಕಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News