ಖುಷಿಯಾಗಿರಲು ಸಲಹೆ ನೀಡಲಿದ್ದಾರೆ ರವೀಶ್ ಕುಮಾರ್ !

Update: 2017-06-03 06:09 GMT

ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಹೊಸ ಸ್ಟಾರ್ಟ್ ಅಪ್ ಒಂದನ್ನು ಪ್ರಾರಂಭಿಸಿದ್ದಾರೆ. ಎನ್ ಡಿ ಟಿ ವಿ ಮೂಲಕ ದೇಶಾದ್ಯಂತ ಚಿರಪರಿಚಿತರಾಗಿರುವ, ಬಿಜೆಪಿ ಹಾಗು ಸಂಘ ಪರಿವಾರದ ಕೆಂಗಣ್ಣಿಗೆ ಹಾಗು ಜಾತ್ಯತೀತರ ಪ್ರೀತಿಗೆ ಪಾತ್ರರಾಗಿರುವ ರವೀಶ್ ಈ ಹೊಸ " ಉಚಿತ " ಸ್ಟಾರ್ಟ್ ಅಪ್ ಮೂಲಕ ಜನರಿಗೆ ಸರಣಿ ಸಲಹೆಗಳನ್ನು ನೀಡಲಿದ್ದಾರೆ ಎಂದು  ಎಂದು ಈ ಸ್ಟಾರ್ಟ್ ಅಪ್ ನ ಟ್ರೇಲರ್ ನಲ್ಲಿ ರವೀಶ್ ಹೇಳಿದ್ದಾರೆ. ಜನರಿಗೆ ಖುಷಿಯಾಗಿರಲು, ಸಕಾರಾತ್ಮಕವಾಗಿ ಯೋಚಿಸಲು ಬೇಕಾದ ಸಲಹೆ ಈಗ ಸಿಗುತ್ತಿಲ್ಲ, ಅದನ್ನು ನಾನು ನೀಡಲಿದ್ದೇನೆ ಎಂದು ಅದರಲ್ಲಿ ರವೀಶ್ ಹೇಳಿದ್ದಾರೆ. 

ಆಪ್ತವಾಗಿ ಮಾತನಾಡುವ, ನಿರೂಪಣೆ ಮಾಡುವ ರವೀಶ್ ರ ಈ ಹೊಸ ಯೋಜನೆ ಜನರಲ್ಲಿ ತೀವ್ರ ಆಸಕ್ತಿ ಕೆರಳಿಸುವುದು ಖಚಿತ. 

ಅದರ ಟ್ರೇಲರ್ ಇಲ್ಲಿದೆ ನೋಡಿ : 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News