ವಿಶೇಷ ಸೌಕರ್ಯಗಳು ಬೇಡ ಎಂದ ಆದಿತ್ಯನಾಥ್ ಜೊತೆ ಬಂದುಹೋಯ್ತು 20 ಕೂಲರ್ ಗಳು!

Update: 2017-06-05 12:47 GMT

ಅಲಹಾಬಾದ್, ಜೂ.5: ತನಗೆ ಯಾವುದೇ ವಿಶೇಷ ಸೌಕರ್ಯಗಳು ಬೇಡ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅಧಿಕಾರಿಗಳಿಗೆ ಆದೇಶಿಸಿದ 24 ಗಂಟೆಗಳೊಳಗಾಗಿ ಆದಿತ್ಯನಾಥ್ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ ವೇಳೆ 20 ಏರ್ ಕೂಲರ್ ಗಳನ್ನು ಅಳವಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಎರಡು ದಿನಗಳ ಅಲಹಾಬಾದ್ ಪ್ರವಾಸದ ಸಂದರ್ಭ ಇಲ್ಲಿನ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ ಮೂಳೆರೋಗ ವಿಭಾಗಕ್ಕೆ ಆದಿತ್ಯನಾಥ್ ಭೇಟಿ ನೀಡಿದ್ದು, ಈ ಸಂದರ್ಭ ಸುಮಾರು 20 ಕೂಲರ್ ಗಳನ್ನು ಅಳವಡಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಆಸ್ಪತ್ರೆಯಿಂದ ತೆರಳುತ್ತಿದ್ದಂತೆಯೇ ಕೂಲರ್ ಗಳನ್ನೂ ರಿಕ್ಷಾದಲ್ಲಿ ಸಾಗಿಸಲಾಯಿತು.

ತಾನು ಭೇಟಿ ನೀಡುವಲ್ಲೆಲ್ಲ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಮುಖ್ಯಮಂತ್ರಿ ಅಥವಾ ಅಧಿಕಾರಿಗಳ ಭೇಟಿಗಾಗಿ ವಿಶೇಷ ವ್ಯವಸ್ಥೆ ಏರ್ಪಡಿಸಬಾರದು ಎಂದು ಆದಿತ್ಯನಾಥ್ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News