ಕಟ್ಟಡ ಕಾಮಗಾರಿ ವೇಳೆ ಭೂಕುಸಿತ: ನಾಲ್ವರು ಮೃತ್ಯು

Update: 2017-06-05 14:17 GMT

ತಿರುನಂತಪುರಂ, ಜೂ.5: ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಭೂಕುಸಿತಗೊಂಡು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ತಿರುವನಂತಪುರದ ಪಂಗಪ್ಪರ ಎಂಬಲ್ಲಿ ಸಂಭವಿಸಿದೆ.

ಕೇರಳ ಲ್ಯಾಂಡ್ ರಿಫಾರ್ಮ್ಸ್ ಕೊ-ಆಪರೇಟಿವ್ ಸೊಸೈಟಿಯಡಿ ನಿರ್ಮಾಣವಾಗುತ್ತಿರುವ ಫ್ಯ್ಲಾಟ್ ನ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.

ಮೃತಪಟ್ಟವರನ್ನು ಬಂಗಾಳದ ಜಾನ್ ಹಾಗೂ ಸಪಾನ್ ಮತ್ತು ಬಿಹಾರದ ಬರ್ನದ್ ಬರ್ಮಾನ್ ಎಂದು ಗುರುತಿಸಲಾಗಿದ್ದು, ಕೇರಳದ ಉನ್ನಿಕೃಷ್ಣನ್ ಎಂಬವರೂ ಮೃತಪಟ್ಟಿದ್ದಾರೆ.

ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಒಟ್ಟು 6 ಮಂದಿ ಕಾರ್ಮಿಕರಿದ್ದರು ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News