ನ್ಯಾಯಮೂರ್ತಿ ಕರ್ಣನ್ ಬಂಧನ

Update: 2017-06-20 14:45 GMT

ಚೆನ್ನೈ, ಜೂ.20: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಸಿ.ಎಸ್ .ಕರ್ಣನ್ ರನ್ನು ಪಶ್ಚಿಮ ಬಂಗಾಳದ ವಿಶೇಷ ತನಿಖಾ ತಂಡ (ಸಿಐಡಿ)ಕೊಯಂಬತ್ತೂರಿನಲ್ಲಿ ಇಂದು ಬಂಧಿಸಿದೆ.

ಮೇ 9ರಂದು ನಾಪತ್ತೆಯಾಗಿದ್ದ ಕರ್ಣನ್ ಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಆರು ತಿಂಗಳ ಶಿಕ್ಷೆ ವಿಧಿಸಿತ್ತು. ಬಂಧಿತ ನ್ಯಾ. ಕರ್ಣನ್ ರನ್ನು ಬುಧವಾರ ಕೋಲ್ಕತಾಕ್ಕೆ ಕರೆ ತರಲಾಗುವುದು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News