ರಾಷ್ಟ್ರಪತಿ ಚುನಾವಣೆ: ಕೋವಿಂದ್‌ಗೆ ಎಐಎಡಿಎಂಕೆ ಬಣದ ಬೆಂಬಲ

Update: 2017-06-22 12:28 GMT

ಚೆನ್ನೈ, ಜೂ.22: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್‌ನಾಥ್ ಕೋವಿಂದ್‌ಗೆ ಎಐಎಡಿಎಂಕೆ(ಅಮ್ಮಾ)ಬಣ ಬೆಂಬಲ ಘೋಷಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿಗೆ ಪ್ರಧಾನಿ ಮೋದಿ ಕರೆ ಮಾಡಿ ಬೆಂಬಲ ಯಾಚಿಸಿದ ಎರಡು ದಿನಗಳ ಬಳಿಕ ಈ ಘೋಷಣೆ ಹೊರಬಿದ್ದಿದೆ. ಕೋವಿಂದ್‌ರನ್ನು ಬೆಂಬಲಿಸಲು ಸರ್ವ ಸಮ್ಮತವಾಗಿ ನಿರ್ಧರಿಸಲಾಯಿತು ಎಂದು ಪಕ್ಷದ ಪ್ರಧಾನಕಚೇರಿಯ ಕಾರ್ಯದರ್ಶಿಯೂ ಆಗಿರುವ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

  ಬೆಂಗಳೂರಿನಲ್ಲಿ ಜೈಲಿನಲ್ಲಿರುವ ವಿ.ಕೆ.ಶಶಿಕಲಾರನ್ನು ಮಂಗಳವಾರ ಭೇಟಿಯಾಗಿದ್ದ ಪಕ್ಷದ ಮುಖಂಡ ದಿನಕರನ್, ಕೋವಿಂದ್‌ಗೆ ಪಕ್ಷದ ಬೆಂಬಲ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಿರ್ಧರಿಸಲಿದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News