ಬಿಹಾರದಲ್ಲಿ ಇಬ್ಬರು ದಲಿತ ಯುವಕರನ್ನು ಥಳಿಸಿ ಹತ್ಯೆ

Update: 2017-06-29 15:15 GMT

ಪಾಟ್ನಾ,ಜೂ.29: ಗುಂಪೊಂದು ಕಳ್ಳರೆಂಬ ಶಂಕೆಯಿಂದ ಇಬ್ಬರು ದಲಿತ ಯುವಕರನ್ನು ಥಳಿಸಿ ಹತ್ಯೆಗೈದಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ಪಾರ್ಸಿಯಾನ್ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಬಬನ್ ಮುಸಾಹರ್ ಮತ್ತು ಮುರಹು ಮುಸಾಹರ್ ಕೊಲೆಯಾಗಿರುವ ಯುವಕ ರಾಗಿದ್ದು, ಡಝನ್‌ಗೂ ಅಧಿಕ ಅಪರಿಚಿತ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಸತೀಶ ಕುಮಾರ್ ತಿಳಿಸಿದರು.

ಈ ಇಬ್ಬರು ಯುವಕರು ಮನೆಯೊಂದನ್ನು ಪ್ರವೇಶಿಸಲು ಯತ್ನಿಸುತ್ತಿದ್ದರೆನ್ನಲಾಗಿದ್ದು, ಮನೆಮಾಲಿಕ ಬೊಬ್ಬೆ ಹೊಡೆದಾಗ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರ ಗುಂಪು ಅವರನ್ನು ಹಿಡಿದಿತ್ತು.ತಾವು ಅಮಾಯಕರು ಎಂದು ಅವರು ಹೇಳಿಕೊಂಡರೂ ಅದನ್ನು ಕಡೆಗಣಿಸಿದ ಗುಂಪು ಅವರು ಗಾಯಗಳಿಂದ ಸಾಯುವವರೆಗೂ ಕ್ರೂರವಾಗಿ ಥಳಿಸಿತ್ತು ಎಂದು ಕುಮಾರ್ ತಿಳಿಸಿದರು.

ಕಳೆದ ಆರು ತಿಂಗಳಲ್ಲಿ ಬಿಹಾರದಾದ್ಯಂತ ಗುಂಪುಗಳಿಂದ ಹತ್ಯೆಯಾದ ಸುಮಾರು 12 ಪ್ರಕರಣಗಳು ದಾಖಲಾಗಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News