ಜಾರ್ಖಂಡ್: ಗೋಮಾಂಸ ಸಾಗಾಟ ಆರೋಪ: ವ್ಯಕ್ತಿಯ ಥಳಿಸಿ ಹತ್ಯೆ

Update: 2017-06-29 15:38 GMT

 ರಾಂಚಿ, ಜೂ. 29: ಗೋಮಾಂಸ ಕೊಂಡೊಯ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದ ಘಟನೆ ಜಾರ್ಖಂಡ್‌ನ ರಾಮ್‌ಗಢ್ ಜಿಲ್ಲೆಯಲ್ಲಿ ನಡೆದಿದೆ. ಅಲಿಮುದ್ದಿನ್ ಆಲಿಯಾಸ್ ಅಸ್ಗರ್ ಅನ್ಸಾರಿ ಮಾರುತಿ ವ್ಯಾನ್‌ನಲ್ಲಿ ಗೋಮಾಂಸ ಕೊಂಡೊಯ್ಯುತ್ತಿದ್ದಾನೆ ಎಂದು ಸಂಶಯಿಸಲಾಗಿತ್ತು. ಬಜರ್ಟಾಂಡ್ ಗ್ರಾಮದ ಸಮೀಪ ಜನರ ಗುಂಪೊಂದು ಮಾರುತಿ ವ್ಯಾನ್ ತಡೆದು ಒಳಗಿದ್ದ ಅಸ್ಸರ್ ಮೇಲೆ ಗಂಭೀರ ಹಲ್ಲೆ ನಡೆಸಿದೆ. ಅಲ್ಲದೆ ಆತನ ಮಾರುತಿ ವ್ಯಾನ್‌ಗೆ ಬೆಂಕಿ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹಲ್ಲೆಕೋರರಿಂದ ಅಸ್ಗರ್ ಅನ್ಸಾರಿಯನ್ನು ರಕ್ಷಿಸಿದರು. ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.

ಇದು ಪೂರ್ವ ಯೋಜಿತ ಹತ್ಯೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿದೇಶರ್ಕ ಆರ್.ಕೆ. ಮಲ್ಲಿಕ್ ತಿಳಿಸಿದ್ದಾರೆ.

ಇದು ಜಾರ್ಖಂಡ್‌ನಲ್ಲಿ ಕಳೆದ ಮೂರು ದಿನಗಳಲ್ಲಿ ನಡೆಯುತ್ತಿರುವ ಮೂರನೇ ಪ್ರಕರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News