'ಕುರುಕ್ಷೇತ್ರ' ಚಿತ್ರಕ್ಕೆ ದರ್ಶನ್ ಗುಡ್ ಬೈ?

Update: 2017-07-02 04:52 GMT

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಪಾಲಿಗೆ ನಿರಾಶಾದಾಯಕ ಸುದ್ದಿಯೊಂದು ಸ್ಯಾಂಡಲ್ ವುಡ್ ತುಂಬೆಲ್ಲಾ ಹರಿದಾಡುತ್ತಿದೆ. ತಮ್ನ 50ನೇ ಚಿತ್ರ ಎಂದೇ ಹೇಳಲಾಗುತ್ತಿರುವ 'ಕುರುಕ್ಷೇತ್ರ'ದಿಂದ ದರ್ಶನ್ ದೂರ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಖ್ಯಾತ ನಿರ್ಮಾಪಕ ಮುನಿರತ್ನ ನಿರ್ಮಿಸಲು ಉದ್ದೇಶಿಸಿರುವ 'ಕುರುಕ್ಷೇತ್ರ'ದಲ್ಲಿ ದರ್ಶನ್ ಅವರು ದುರ್ಯೋಧನ ಪಾತ್ರವನ್ನು ಮಾಡುತ್ತಾರೆಂದು ಹೇಳಲಾಗುತ್ತಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಭಾರೀ ಬಜೆಟ್ ಚಿತ್ರವೆನಿಸಲಿದೆ ಎಂಬ ವಿಶ್ಲೇಷಿಸಲಾಗುತ್ತಿರುವ ಈ ಚಿತ್ರದಲ್ಲಿ ಶಿವರಾಜ್ ಕುಮಾರ್, ಪುನೀತ್, ಉಪೇಂದ್ರ, ರವಿಚಂದ್ರನ್, ಅಂಬರೀಶ್  ಮೊದಲಾದ ಘಟಾನುಘಟಿ ನಟರೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟರಲ್ಲೇ ದರ್ಶನ್ ಕುರಿತ ನಿರಾಶಾದಯಕ ಸುದ್ದಿ ಹರಿದಾಡಿದೆ. 

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ 'ಕುರುಕ್ಷೇತ್ರ' ಚಿತ್ರ ಸೆಟ್ಟೇರಬೇಕಿತ್ತು. ಆದರೆ ಈ ವರೆಗೂ ಪಾತ್ರಗಳ ಹಂಚಿಕೆಯಾಗದಿದ್ದುದರಿಂದ ಬೇಸರಗೊಂಡು ದರ್ಶನ್  ಈ ನಿಷ್ಟುರ ನಿರ್ಧಾರ ಕೈಗೊಂಡರೆಂದು ಹೇಳಲಾಗುತ್ತಿದೆ. 

ಇದೀಗ 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ಅ ಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ‌. ಆದರೆ ನಿರ್ಮಾಪಕ-ನಿರ್ದೇಶಕರು ಮಾತ್ರ ಈ ಬಗ್ಗೆ ಎಲ್ಲೂ ತುಟಿ ಬಿಚ್ಚಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News