ಜಾರ್ಖಂಡ್ ಮುಖ್ಯಮಂತ್ರಿಯ ಕಾಲುತೊಳೆದ ಮಹಿಳೆಯರು!

Update: 2017-07-09 09:20 GMT

ಜಮ್ಶೇಡ್ ಪುರ, ಜು.9: ಕಾರ್ಯಕ್ರಮವೊಂದರಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುಬಾರ್ ದಾಸ್ ರ ಕಾಲುಗಳನ್ನು ಮಹಿಳೆಯರು ತೊಳೆಯುವ ಫೋಟೊಗಳು ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಜಮ್ಶೇಡ್ ಪುರದ ಬ್ರಹ್ಮಲೋಕ ಧಾಮ್ ನಲ್ಲಿ ನಡೆದ “ಗುರು ಮಹೋತ್ಸವ” ಕಾರ್ಯಕ್ರಮದಲ್ಲಿ ಮಹಿಳೆಯರು ಮುಖ್ಯಮಂತ್ರಿ ರಘುಬಾರ್ ದಾಸ್ ರ ಕಾಲುಗಳನ್ನು ತೊಳೆದಿದ್ದಾರೆ. ಈ ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.

ಆಷಾಢ ತಿಂಗಳಲ್ಲಿ ಗುರು ಮಹೋತ್ಸವ ವರ್ಷಂಪ್ರತಿ ನಡೆಯುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News