ಪಶ್ಚಿಮ ಬಂಗಾಳದ ಹಿಂದೂಗಳು ಗುಜರಾತ್ ಮಾದರಿಯ ಪ್ರತಿಕ್ರಿಯೆ ನೀಡಿ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2017-07-09 13:15 GMT

ಪಶ್ಚಿಮ ಬಂಗಾಳ, ಜು.9: ಕೋಮುದಳ್ಳುರಿಗೆ ಸಿಲುಕಿ ಪಶ್ಚಿಮ ಬಂಗಾಳದ ಬದುರಿಯಾ ಹಾಗೂ ಬಸಿರ್ಹತ್ ನಲುಗುತ್ತಿರುವ ನಡುವೆಯೇ, ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ರಾಜಾ ಸಿಂಗ್, “2002ರಲ್ಲಿ ಗುಜರಾತ್ ನ ಹಿಂದೂಗಳು ನೀಡಿದ್ದ ಪ್ರತಿಕ್ರಿಯೆಯನ್ನು ಈಗ ಬಂಗಾಳದ ಹಿಂದೂಗಳು ನೀಡಬೇಕು”  ಎಂದಿದ್ದಾರೆ,

ಟ್ವಿಟ್ಟರ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ರಾಜಾ ಸಿಂಗ್, “ಪಶ್ಚಿಮ ಬಂಗಾಳದಲ್ಲಿ ಇಂದು ಹಿಂದೂಗಳು ಸುರಕ್ಷಿತರಲ್ಲ. ಗುಜರಾತ್ ನ ಹಿಂದೂಗಳು 2002ರಲ್ಲಿ ನೀಡಿದ್ದ ಪ್ರತಿಕ್ರಿಯೆಯನ್ನು ಬಂಗಾಳದ ಹಿಂದೂಗಳೂ ನೀಡಬೇಕು. ಇಲ್ಲದಿದ್ದಲ್ಲಿ ಶೀಘ್ರವೇ ಪಶ್ವಿಮ ಬಂಗಾಳ ಬಾಂಗ್ಲಾದೇಶವಾಗಲಿದೆ” ಎಂದಿದ್ದಾರೆ.

ಪಶ್ಚಿಮ ಬಂಗಾಳ ಸರಕಾರ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಕೋಮುವಾದವನ್ನು ಹರಡುವವರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದವರು ಆರೋಪಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News