ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣ: ವಂಝಾರ, ದಿನೇಶ್ ಖುಲಾಸೆ

Update: 2017-08-01 09:57 GMT

ಹೊಸದಿಲ್ಲಿ, ಆ.1: ಸೊಹ್ರಾಬುದ್ದೀನ್ ಶೇಖ್ ಹಾಗೂ ತುಳಸೀರಾಮ್ ಪ್ರಜಾಪತಿ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಸಿಬಿಐ ನ್ಯಾಯಾಲಯವು ಐಪಿಎಸ್ ಅಧಿಕಾರಿಗಳಾದ ಡಿ.ಜಿ. ವಂಝಾರ ಹಾಗೂ ದಿನೇಶ್ ಎಂ.ಎನ್.ರನ್ನು ಬಿಡುಗಡೆಗೊಳಿಸಿದೆ.

ಈ ಎರಡು ಪ್ರಕರಣಗಳಿಗೆ ಸಂಬಂಧಿಸಿ ಮುಂಬೈ ಕೋರ್ಟ್ ಒಟ್ಟು 15 ಜನರನ್ನು ಖುಲಾಸೆಗೊಳಿಸಿದೆ. ಜಾಮೀನಿನ ಮೇಲೆ ಬಿಡುಗಡೆ ಹೊಂದುವ ಮೊದಲು 7 ವರ್ಷಗಳನ್ನು ವಂಝಾರ ಹಾಗೂ ದಿನೇಶ್ ಅಹ್ಮದಾಬಾದ್ ಜೈಲಿನಲ್ಲಿ ಕಳೆದಿದ್ದರು.

ಪ್ರಜಾಪತಿ ಹಾಗೂ ತನ್ನ ಪತ್ನಿ ಕೌಸರ್ ಬಿಯವರೊಂದಿಗೆ ಸೊಹ್ರಾಬುದ್ದೀನ್ ಹೈದರಾಬಾದ್-ಸಾಂಗ್ಲಿ ಬಸ್ ನಲ್ಲಿ ತೆರಳುತ್ತಿದ್ದ ಸಂದರ್ಭ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಅವರನ್ನು ವಶಕ್ಕೆ ಪಡೆದುಕೊಂಡು ನಕಲಿ ಎನ್ ಕೌಂಟರ್ ನಲ್ಲಿ ಸೊಹ್ರಾಬುದ್ದೀನ್ ಹಾಗೂ ಕೌಸರ್ ಬಿಯವರನ್ನು ನಕಲಿ ಎನ್ ಕೌಂಟರ್ ನಡೆಸಿತ್ತು.

ಈ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದ ತುಳಸೀರಾಮ್ ರನ್ನು ಒಂದು ವರ್ಷದ ನಂತರ ಕೊಲ್ಲಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News