'ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ'ಕ್ಕೆ ಮುಹೂರ್ತ

Update: 2017-08-05 05:11 GMT

ನಿತ್ಯ ಜೊತೆ ಸತ್ಯ ಎಂಬ ಕನ್ನಡ, ತೆಲುಗು ದ್ವಿಭಾಷಾ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಾಥ್ ಇದೀಗ ಹೊಸದೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. 'ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ಧ' ಎಂಬ ಹೊಸ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

ಚಿತ್ರದ ನಾಯಕ ಪ್ರಭು ಈ ಹಿಂದೆ ತಾವು ಉರ್ವಿ ಸಿನಿಮಾದಲ್ಲಿ ನಟಿಸಿರುವುದಾಗಿ ತಿಳಿಸಿದರು. ನಾಯಕಿಯರಾಗಿ 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತಾ ಹೆಗ್ಡೆ ಮತ್ತು ನವನಟಿ ಸುಷ್ಮಿತಾ ಗೌಡ ಪಾತ್ರವಹಿಸಿದ್ದಾರೆ. ತಮ್ಮದು ಅಟಿಟ್ಯೂಡ್ ತುಂಬಿರುವ ಶ್ರೀಮಂತ ಹುಡುಗಿಯ ಪಾತ್ರ ಎಂದು ಸುಷ್ಮಿತಾ ತಿಳಿಸಿದರು.

ಅಂದಹಾಗೆ ಅವರು ರವಿಚಂದ್ರನ್ ನಾಯಕರಾಗಿರುವ 'ಬಕಾಸುರ' ಚಿತ್ರದಲ್ಲಿಯೂ ನಟಿಸುತ್ತಿರುವುದಾಗಿ ತಿಳಿಸಿದರು. ಇದೊಂದು ಮ್ಯೂಸಿಕಲ್ ಥ್ರಿಲ್ಲರ್ ಎಂದು ಹೇಳಿದ ನಿರ್ದೇಶಕರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ಚಿತ್ರದ ಶೀರ್ಷಿಕೆಯು ನಾಯಕಿಯ ಮನಸ್ಥಿತಿಯನ್ನು ತಿಳಿಸುವುದಾಗಿ ಅವರು ಹೇಳಿದರು.

ಚಿತ್ರಕ್ಕೆ ತೆಲುಗು ಪ್ರತಿಭೆ ಕಿರಣ್ ಸಂಗೀತ ನೀಡಲಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಉಡುಪಿಯಲ್ಲಿ ಒಟ್ಟು 35 ದಿನಗಳ ಚಿತ್ರೀಕರಣ ನಡೆಯಲಿದೆಯಂತೆ. ನಿರ್ಮಾಪಕರಾದ ವಿಜಯಕುಮಾರ್, ಪ್ರವೀಣ್ ದಾಸ್, ಸುರೇಶ್ ಉಪಸ್ಥಿತರಿದ್ದರು.

ಸುರೇಶ್ ಚಿತ್ರದ ಸಂಕಲನಕಾರರೂ ಆಗಿದ್ದು, ಈ ಹಿಂದೆ ಬುಲೆಟ್ ರಾಣಿ, ನಾಗರಹಾವು, ಚಂದ್ರಿಕಾ ಚಿತ್ರಗಳಿಗೆ ಸಂಗೀತ ನೀಡಿದ್ದಾಗಿ ಸ್ಮರಿಸಿಕೊಂಡರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News