ಜಗ್ಗೇಶ್ ಪುತ್ರನಿಗೆ ಹಲ್ಲೆ: ಆಸ್ಪತ್ರೆಗೆ ದಾಖಲು

Update: 2017-08-14 05:13 GMT

ಬೆಂಗಳೂರು, ಆ. 14: ನವರಸ ನಾಯಕ ಜಗ್ಗೇಶ್ ಪುತ್ರ, ನಟ ಗುರುರಾಜ್ ಮೇಲೆ ಬೆಂಗಳೂರಿನ ಆರ್.ಟಿ.ನಗರ ಬಳಿ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ತಮ್ಮ ಮಗನನ್ನು ಆರ್.ಟಿ.ನಗರ ಬಳಿಯ ಶಾಲೆಗೆ ಗುರು ಅವರು ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ನಡೆದ ಘಟನೆಯಲ್ಲಿ ಅಪರಿಚಿತರು ಗುರುರಾಜ್ ಮೇಲೆ ಚೂರಿಯಿಯಿಂದ ಇರಿದಿದ್ದಾರೆ. ಇರಿತದಿಂದಾಗಿ ಗುರು ಅವರ ತೊಡೆಯ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಹೆಬ್ಬಾಳ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಗ್ಗೇಶ್ ಸ್ಪಷ್ಟನೆ: ನಟ ಗುರುರಾಜ್ ಮೇಲಿನ ದಾಳಿ ದ್ವೇಷದ ಘಟನೆಯಲ್ಲ. ಮಗುವನ್ನು ಶಾಲೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗಮಧ್ಯೆ ವಾಹನವೊಂದು ಯದ್ವಾತದ್ವ ಹೋಗುತ್ತಿತ್ತು. ಈ ಬಗ್ಗೆ ಆ ವಾಹನದ ಚಾಲಕನನ್ನು ಪ್ರಶ್ನಿಸಿದ್ದಕ್ಕೆ ದುಸ್ಕರ್ಮಿಗಳು ಈ ದಾಳಿ ಮಾಡಿದ್ದಾರೆ ಎಂದು ಗುರು ಅವರ ತಂದೆ ಜಗ್ಗೇಶ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಒಂದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದು, ದಾಳಿ ನಡೆಸಿದವರು ರೌಡಿಗಳಿರಬಹುದು ಎಂದು ಜಗ್ಗೇಶ್  ಸಂಶಯ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಆರ್.ಟಿ.ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ದಾಳಿ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News