ಡಾಂಬುಲ್ಲಾ ತಲುಪಿದ ವಿರಾಟ್ ಕೊಹ್ಲಿ ಪಡೆ

Update: 2017-08-17 18:43 GMT

ಡಾಂಬುಲ್ಲಾ, ಆ.17: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿರುವ ಭಾರತ ತಂಡ ಆಗಸ್ಟ್ 20 ರಂದು ನಡೆಯಲಿರುವ ಮೊದಲ ಏಕದಿನ ಪಂದ್ಯವನ್ನಾಡಲು ಗುರುವಾರ ಡಾಂಬುಲ್ಲಾಕ್ಕೆ ಆಗಮಿಸಿದೆ.

ಟೀಮ್ ಇಂಡಿಯಾ ಸದಸ್ಯರು ಬಸ್‌ನಿಂದ ಇಳಿಯುವುದು ಹಾಗೂ ಶ್ರೀಲಂಕಾ ಮಹಿಳೆಯರಿಂದ ಸ್ವಾಗತ ಸ್ವೀಕರಿಸುತ್ತಿರುವ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹಾಕಿದೆ. ಶಿಖರ್ ಧವನ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅವರನ್ನೊಳಗೊಂಡ ಭಾರತದ ಬಲಿಷ್ಠ ಬ್ಯಾಟಿಂಗ್ ಸರದಿ ಶ್ರೀಲಂಕಾ ತಂಡಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಸವಾಲಾಗಲು ಎದುರು ನೋಡುತ್ತಿದೆ. ಶ್ರೀಲಂಕಾ ತಂಡ ಆ್ಯಂಜೆಲೊ ಮ್ಯಾಥ್ಯೂಸ್, ಉಪುಲ್ ತರಂಗ ಹಾಗೂ ತಿಸಾರ ಪೆರೇರರನ್ನು ಹೆಚ್ಚು ಅವಲಂಬಿಸಿದೆ. ನಿರೋಶನ್ ಡಿಕ್ವೆಲ್ಲಾ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಲಸಿತ್ ಮಾಲಿಂಗ ಶ್ರೀಲಂಕಾದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಭಾರತ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ ಕುಮಾರ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News