ಶಶಿಕಲಾ ಉಚ್ಛಾಟನೆಗೆ ಕ್ರಮ ಕೈಗೊಳ್ಳಲಾಗುವುದು: ಎಐಎಡಿಎಂಕೆ ಸಂಸದ

Update: 2017-08-21 15:13 GMT

ಚೆನ್ನೈ, ಆ.21: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಉಚ್ಛಾಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ಹಿರಿಯ ನಾಯಕ, ಸಂಸದ ಆರ್. ವೈತಿಲಿಂಗಂ ಹೇಳಿದ್ದಾರೆ.

ಪಳನಿಸ್ವಾಮಿ ಬಣದ ನಾಯಕರಾದ ವೈತಿಲಿಂಗಂ ಪಕ್ಷದ ಸಭೆಯಲ್ಲಿ ಮಾತನಾಡಿ ಶಶಿಕಲಾ ಉಚ್ಛಾಟನೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿದೆ ಎಂದರು. ಈ ಘೋಷಣೆಯ ಮೂಲಕ ಪಳನಿಸ್ವಾಮಿ ಬಣ ಪನೀರ್ ಸೆಲ್ವಂ ಬಣಕ್ಕೆ ನೀಡಿದ್ದ ಭರವಸೆಯನ್ನು ಕಾರ್ಯರೂಪಕ್ಕೆ ತಂದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News