ಬುದ್ಧ ದಳದ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ

Update: 2017-08-22 17:40 GMT

ಬರ್ನಾಲಾ (ಪಂಜಾಬ್), ಆ. 22: ಬರ್ನಾಲಾ ಜಿಲ್ಲೆಯ ಕಹ್ಲೇಕಾದಲ್ಲಿ ಎರಡು ಬಣಗಳ ನಡುವಿನ ಜಗಳದಲ್ಲಿ ನಿಹಲಾಂಗ್ ಸಿಕ್ಖ್ ಬಣದ ಬುದ್ಧ ದಳದ ಕಾರ್ಯಕರ್ತನನ್ನು ಮಂಗಳವಾರ ಗುಂಡಿಟ್ಟು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಜೀಪಿನಲ್ಲಿ ಮಧ್ಯರಾತ್ರಿ ಆಗಮಿಸಿದ ದುಷ್ಕರ್ಮಿಗಳು ಗ್ರಾಮದ ಸಮುದಾಯ ಭವನದಲ್ಲಿ ಮಲಗಿದ್ದ ಕಾರ್ಯಕರ್ತ ಬಹುದ್ದೂರ್ ಸಿಂಗ್ ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಿದರು ಎಂದು ಉಪ ಪೊಲೀಸ್ ಅಧೀಕ್ಷಕ ಎ.ಎಸ್. ಶರ್ಮಾ ತಿಳಿಸಿದ್ದಾರೆ.

 ಬಹದ್ದೂರ್ ತನ್ನ ಇತರ ಕಾರ್ಯಕರ್ತರೊಂದಿಗೆ ಸಮುದಾಯ ಭವನದಲ್ಲಿ ಮಲಗಿದ್ದ ಸಂದರ್ಭ ಈ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಜಸ್ಪಾಲ್ ಸಿಂಗ್, ಸುಖ್ವಿಂದರ್ ಸಿಂಗ್, ಜಗ್‌ರಾಜ್ ಸಿಂಗ್, ಬಲ್‌ದೇವ್ ಸಿಂಗ್, ಅರ್ಜುನ್ ದೇವ್, ಸರ್ವಾನ್ ಸಿಂಗ್ ಹಾಗೂ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News