ಹೊಟ್ಟೆ ತುಂಬಿದವರ ಟೀಕೆ

Update: 2017-08-22 18:48 GMT

ಮಾನ್ಯರೆ,
ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ತೆರೆದದ್ದೇ ತಡ ಕೆಲವೆಡೆ ಅಪಸ್ವರಗಳು ಕೇಳಿ ಬರುತ್ತಿವೆ. ಕೆಲವರು ಇದನ್ನು ಚುನಾವಣಾ ಗಿಮಿಕ್ ಎಂದರೆ ಮತ್ತೆ ಕೆಲವರು ಇದು ಜನರನ್ನು ಸೋಮಾರಿಯನ್ನಾಗಿಸುತ್ತದೆ ಎಂದು ವಾದ ಮಾಡುತ್ತಿದ್ದಾರೆ.
ಆದರೆ ಹಸಿದವರಿಗೆ ಉಣಬಡಿಸುವ ಸತ್ಕರ್ಮಕ್ಕಿಂತ ಮಿಗಲಾದ ಬೇರೆ ಯಾವುದೇ ಸತ್ಕರ್ಮ ಇರಲಿಕ್ಕೆ ಸಾಧ್ಯವಿಲ್ಲ ಎಂಬ ಸತ್ಯವನ್ನು ಖಂಡಿತವಾಗಿಯೂ ಯಾರಿಂದಲೂ ನಿರಾಕರಿಸಲು ಸಾಧ್ಯವಿಲ್ಲ.
ಅನೇಕ ಬಡವರು, ಕಟ್ಟಡ ಕಾರ್ಮಿಕರು ಉದ್ಯೋಗವನ್ನು ಅರಸಿಕೊಂಡು ಹಾಗೂ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲಿಕ್ಕಾಗಿ ಹಳ್ಳಿಗಳಿಂದ ಉದ್ಯಾನ ನಗರಿ ಬೆಂಗಳೂರಿಗೆ ಪ್ರತೀ ದಿನ ಆಗಮಿಸುತ್ತಾರೆ, ಅಂತಹ ಎಲ್ಲ ಮಧ್ಯಮ ಹಾಗೂ ಬಡ ಜನರಿಗೆ ಇಂದಿರಾ ಕ್ಯಾಂಟಿನ್ ವರದಾನವೇ ಸರಿ. ಹೊಟ್ಟೆತುಂಬಿದವರಿಗೆ ಹಸಿವಿನ ಅನುಭವ ಅರ್ಥವಾಗಲಿಕ್ಕಿಲ್ಲ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ವಿರೋಧಿಸುವವರು ಒಂದೇ ಒಂದು ದಿನ ಉಪವಾಸ ಇದ್ದರೆ ಹಸಿವಿನ ಮಹತ್ವ ಏನೆಂದು ಇವರಿಗೆ ಅರ್ಥವಾಗಬಹುದು.

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News