ಬೀಫ್ ತಿಂದ ಆರೋಪ: ರಾಷ್ಟ್ರಪ್ರಶಸ್ತಿ ವಿಜೇತ ನಟಿಗೆ ನಿಂದನೆ

Update: 2017-09-09 05:24 GMT

ತಿರುವನಂತಪುರಂ, ಸೆ.9: ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ನಟಿ ಸುರಭಿ ಲಕ್ಷ್ಮೀ ಇದೀಗ ಗೋರಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಬೀಫ್ ಸೇವಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ವ್ಯಾಪಕವಾಗಿ ನಿಂದಿಸಲಾಗಿದೆ.

ಮಲಯಾಳಂ ಚಾಲನ್ ಮೀಡಿಯಾ ವನ್ ತಿರು ಓಣಂ ದಿನದಂದು ವಿಶೇಷ ಓಣಂ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ತಕ್ಷಣ ಈ ನಟಿಗೆ ಅಶ್ಲೀಲ ಸಂದೇಶಗಳ ಮಹಪೂರವೇ ಹರಿದುಬರುತ್ತಿದೆ. ಓಣಂ ಸಧ್ಯ ಅಂಗವಾಗಿ ಸುರಭಿ ಲಕ್ಷ್ಮೀ ಬೀಫ್ ತಿನ್ನುತ್ತಿರುವ ದೃಶ್ಯ ಪ್ರಸಾರವಾಗಿತ್ತು.

ನಟಿಯ ಜತೆಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಲ್ಲಿ ಚಾನಲ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಕೇರಳದಲ್ಲಿ ಓಣಂ ಸಧ್ಯದಲ್ಲಿ ಸಸ್ಯಾಹಾರಿ ಖಾದ್ಯಗಳ ಜತೆಗೆ ಮಾಂಸದ ಅಡುಗೆ ಕೂಡಾ ಸವಿಯುವ ಸಂಪ್ರದಾಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News