ಹನಿಪ್ರೀತ್ ಬಗ್ಗೆ ಮಾಹಿತಿ ನೀಡುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಸಾಮಾಜಿಕ ಕಾರ್ಯಕರ್ತ!
Update: 2017-09-22 12:36 GMT
ಶಹಜಾನ್ಪುರ(ಉ.ಪ್ರ),ಸೆ.22: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ ರಹೀಂ ಸಿಂಗ್ ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರಿದ ಬಳಿಕ ತಲೆಮರೆಸಿಕೊಂಡಿರುವ ಆತನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ಕುರಿತು ಮಾಹಿತಿ ನೀಡುವವರಿಗೆ ಒಂದು ಲಕ್ಷ ರೂ.ಗಳ ನಗದು ಬಹುಮಾನ ನೀಡುವುದಾಗಿ ಆಕೆಯ ಬಂಧನಕ್ಕಾಗಿ ಆಗ್ರಹದೊಂದಿಗೆ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿಯನ್ನು ಆರಂಭಿಸಿರುವ ಸಾಮಾಜಿಕ ಕಾಯಕರ್ತ ಫಕೀರಲಾಲ ಭೋಜಬಲ್ ಎನ್ನುವವರು ಪ್ರಕಟಿಸಿದ್ದಾರೆ.
ಜನರು ಹನಿಪ್ರೀತ್ಳನ್ನು ಗುರುತಿಸಲು ಸಾಧ್ಯವಾಗುವಂತೆ ಇಡೀ ನಗರದ ತುಂಬ ಆಕೆಯ ಪೋಸ್ಟರ್ಗಳನ್ನೂ ಅವರು ಅಂಟಿಸಿದ್ದಾರೆ.
ಇಂತಹ ಬಾಬಾಗಳು ದೇಶಕ್ಕೆ ಕಳಂಕವಾಗಿದ್ದಾರೆ. ಇವರು ತಂದೆಮಗಳ ಸಂಬಂಧವನ್ನು ಕೂಡಾ ಕಳಂಕಗೊಳಿಸಿದ್ದಾರೆ. ಆದ್ದರಿಂದ ಹನಿಪ್ರೀತ್ ಳನ್ನು ಬಂಧಿಸಬೇಕು ಎಂದು ಫಕೀರಲಾಲ ಹೇಳುತ್ತಾರೆ.