ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಮುಲಾಯಂ, ಶಿವಪಾಲ್ ಉಚ್ಛಾಟನೆ

Update: 2017-10-16 15:41 GMT

ಹೊಸದಿಲ್ಲಿ, ಅ.16: ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಮುಲಾಯಂ ಸಿಂಗ್ ಯಾದವ್ ಹಾಗು ಶಿವಪಾಲ್ ಯಾದವ್ ಅವರನ್ನು ಸಮಾಜವಾದಿ ಪಕ್ಷವು ಉಚ್ಛಾಟಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ಪಕ್ಷದ ರಾಷ್ಟ್ರೀಯ ಕಚೇರಿಯ ಪದಾಧಿಕಾರಿಗಳ ಪಟ್ಟಿಯಲ್ಲೂ ಈ ಇಬ್ಬರಿಗೆ ಯಾವುದೇ ಹುದ್ದೆಯನ್ನು ನೀಡಲಾಗಿಲ್ಲ. ಪುತ್ರ ಹಾಗು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರೊಂದಿಗೆ ಯಾವುದೆ ಭಿನ್ನಾಭಿಪ್ರಾಯವಿಲ್ಲ ಹಾಗು ನೂತನ ಪಕ್ಷ ರಚಿಸುವ ಯೋಚನೆಯಿಲ್ಲ ಎಂದು ಮುಲಾಯಂ ಸಿಂಗ್ ಹೇಳಿಕೆ ನೀಡಿದ್ದ ಕೆಲ ದಿನಗಳ ನಂತರ  ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News